(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸಿಕೆಪಿ ಏಳು ಮಂದಿ ಸದಸ್ಯತ್ವ ಕ್ರಮಬದ್ಧ

ಚಿತ್ರಕಲಾ ಪರಿಷತ್ತಿನ ಸದಸ್ಯತ್ವದ ಗೊಂದಲಗಳಿಗೆ ತೆರೆ ಎಳೆದಿರುವ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಬಿ.ಎಸ್. ಹರೀಶ್ ನೇತೃತ್ವದ ವಿಚಾರಣೆ ಸಮಿತಿಯು, ಏಳು ಮಂದಿ ಸದಸ್ಯತ್ವ ಕ್ರಮಬದ್ಧವಾಗಿದೆ ಎಂದು ತೀರ್ಪು ನೀಡಿದೆ...

ಬೆಂಗಳೂರು: ಚಿತ್ರಕಲಾ ಪರಿಷತ್ತಿನ ಸದಸ್ಯತ್ವದ ಗೊಂದಲಗಳಿಗೆ ತೆರೆ ಎಳೆದಿರುವ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಬಿ.ಎಸ್. ಹರೀಶ್ ನೇತೃತ್ವದ ವಿಚಾರಣೆ ಸಮಿತಿಯು, ಏಳು ಮಂದಿ ಸದಸ್ಯತ್ವ ಕ್ರಮಬದ್ಧವಾಗಿದೆ ಎಂದು ತೀರ್ಪು ನೀಡಿದೆ.

ಸಿಕೆಪಿಯ ಹಾಲಿ ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಸದಸ್ಯರಾದ ಎ.ರಾಮಕೃಷ್ಣಪ್ಪ, ಪ್ರೊ.ಕೆ.ಈ. ರಾಧಾಕೃಷ್ಣ, ಹರೀಶ್ ಜೆ. ಪದ್ಮನಾಭ, ಉಮಾ ಪಾಟೀಲ್, ಜಿ. ಎನ್. ಸತ್ಯನಾರಾಯಣ, ಡಾ.ಜಿ. ಲಕ್ಷ್ಮೀಪತಿ ಅವರ ಸದಸ್ಯತ್ವ ಪ್ರಶ್ನಿಸಿ ಎಸ್. ಎನ್. ಶ್ರೀದೇವಿ ರಾಜ್ಯಪಾಲರಿಗೆ ದೂರು ನೀಡಿ, ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರ ಕಲಂ 25ರ ಅಡಿ ವಿಚಾರಣೆಗೆ ಕೋರಿದ್ದರು. ಅದರಂತೆ ವಿಚಾರಣೆ ನಡೆದು ಈ ತೀರ್ಪು ಹೊರಬಿದ್ದಿದೆ. ಇದೇ ವೇಳೆ `ದೂರಿನಂತೆ ಸಿಕೆಪಿ ಸದಸ್ಯರಲ್ಲದವರು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅಂಶವನ್ನು ಪುಷ್ಟೀಕರಿಸುವಂತೆ ಯಾವುದೇ ಹೇಳಿಕೆ ಅಥವಾ ಪುರಾವೆಗಳನ್ನು ಒದಗಿಸಿಲ್ಲ' ಎಂದು ಪುಟ 27ರಲ್ಲಿ ಉಲ್ಲೇಖಿಸಲಾಗಿದೆ.

ಈ ವರದಿಯಲ್ಲಿ ಇನ್ನಷ್ಟು ವಿಚಾರಗಳ ಬಗ್ಗೆ ಸತ್ಯ ಶೋಧನೆ ಮಾಡಲಾಗಿದ್ದು, ಡಾ. ರೋರಿಕ್ ವರ್ಣಚಿತ್ರ ಹಾಳಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಬಯಲು ರಂಗಮಂದಿರ ನಿರ್ಮಾಣ ಇಂದಿನ ಕಾರ್ಯಕಾರಿ ಸಮಿತಿಯಿಂದ ನಡೆದಿಲ್ಲ, ಆಡಳಿತಾಧಿಕಾರಿಗಳು ಕ್ರಮಬದ್ಧವಾಗಿಯೇ ಕಾಮಗಾರಿ ಕೈಗೊಂಡಿದ್ದಾರೆ. ಅಲ್ಲದೆ, ಮೈಸೂರು ಸಾಂಪ್ರದಾಯಿಕ ಚಿತ್ರಕಲಾಕೃತಿಗಳು ಹಾಳಾಗದೆ ಹಾಗೆ ಉಳಿದಿರುವ ಬಗ್ಗೆಯೂ ಈ ವರದಿ ಬೆಳಕು ಚೆಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT