ಜಿಲ್ಲಾ ಸುದ್ದಿ

ನಿತ್ಯಾ ಪ್ರಕರಣ ವಿಚಾರಣೆ ಮಾ.11ಕ್ಕೆ ಮುಂದೂಡಿಕೆ

ರಾಮನಗರ: ಬಿಡದಿ ಧ್ಯಾನಪೀಠದ ನಿತ್ಯಾನಂದ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯನ್ನು ರಾಮನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಾ.11ಕ್ಕೆ ಮುಂದೂಡಿದೆ.

ಸಿಐಡಿ ತನಿಖಾಧಿಕಾರಿಗಳು 48 ಮಂದಿ ಸಾಕ್ಷಿದಾರರ ಹೇಳಿಕೆ ಕೈ ಬಿಟ್ಟಿರುವ ಬಗ್ಗೆ ನಿತ್ಯಾ ನಂದ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆ ಮೇಲೆ ವಾದ ಮತ್ತು ಪ್ರತಿವಾದ ಮುಗಿದು, ಬುಧವಾರಕ್ಕೆ ತೀರ್ಪು ಕಾಯ್ದಿರಿಸಲಾಗಿತ್ತು.

ಆದರೆ, ನಿತ್ಯಾನಂದ ಪರ ವಕೀಲರು ಹೆಚ್ಚುವರಿ ವಾದ ಮಂಡಿಸುವ  ವಾದ ಮಂಡಿಸುವ ಜತೆಗೆ ಇಂತಹ ಪ್ರಕರಣಗಲ್ಲಿ ವಿವಿಧ ನ್ಯಾಯಾಲಯಗಳಲ್ಲಿ  ನೀಡಿರುವ ತೀರ್ಪಿನ ಪ್ರತಿನಿಧಿಗಳನ್ನು ನ್ಯಾಯಾಲಯಕ್ಕೆ ಮಂಡಿಸಿದರು. ಹೀಗಾಗಿ ಕಾಯ್ದಿರಿಸಿದ್ದ ತೀರ್ಪು ಪ್ರಕಟವಾಗಲಿಲ್ಲ.

SCROLL FOR NEXT