ಜಿಲ್ಲಾ ಸುದ್ದಿ

ಅಪರಾಧಿಗಳ ಪರ ಅಗತ್ಯ ದಾಖಲೆ ನೀಡಿ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ವೇಳೆ ಅಪರಾಧಿಗಳ ಪರ ವಕೀಲರು ಅಗತ್ಯ ದಾಖಲೆ ನೀಡುತಿಲ್ಲ ಎಂದು ಹೈಕೋರ್ಟ್...

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ವೇಳೆ ಅಪರಾಧಿಗಳ ಪರ ವಕೀಲರು ಅಗತ್ಯ ದಾಖಲೆ ನೀಡುತಿಲ್ಲ ಎಂದು ಹೈಕೋರ್ಟ್ ಕಿಡಿಕಾರಿದೆ.

ಜಯಲಲಿತಾ ಹಾಗೂ ಇತರೆ ಮೂವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಪೀಠದ ನ್ಯಾ.ಸಿ.ಕುಮಾರಸ್ವಾಮಿ ಅವರಿದ್ದ ಪೀಠ, ಸುಖಾಸುಮ್ಮನೆ ವಾದ ಮಾಡುವ ಬದಲಿಗೆ ದಾಖಲೆ ಒದಗಿಸಿ. ವಿಚಾರಣೆ ಆರಂಭಗೊಂಡು 28 ದಿನ ಕಳೆದರೂ, ಸರಿಯಾದ ದಾಖಲೆ ಒದಗಿಸಿಲ್ಲ. ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ರು1 ಸಂಬಳ ಪಡೆದಿದ್ದಾರೆ ಎನ್ನುತ್ತೀರಿ, ಹಾಗಿದ್ದಲ್ಲಿ ರು. 66 ಕೋಟಿ ಹರಿದುಬಂದಿದ್ದಾದರೂ ಹೇಗೆ?

ಹೀಗೆಯೇ ಮುಂದುವರಿದಲ್ಲಿ ನ್ಯಾಯಪೀಠವೇ ಸ್ವಯಂ ಲೆಕ್ಕ-ಪತ್ರ ತಪಾಸಣೆ ನಡೆಸಿ ತೀರ್ಪು ನೀಡಬೇಕಾಗುತ್ತದೆ ಎಂದು ಪೀಠ ಖಡಕ್ ಎಚ್ಚರಿಕೆ ನೀಡಿದೆ. ಜಯಲಲಿತಾ, ಇಳವರಸಿ ಮತ್ತು ಸುಧಾಕರನ್ ಪರ ಅಂತಿಮ ಸುತ್ತಿನ ವಾದ ಮಂಡಿಸಿದ ಹಿರಿಯ ವಕೀಲರಾದ ಬಿ. ಕುಮಾರ್ ಹಾಗೂ ಸ್ವತಂತ್ರನ್ ಅವರು, ಡಿವಿಎಸಿ ವಾಸ್ತವ ಅಂಕಿ-ಅಂಶಗಳನ್ನು ನಮೂದಿಸಿಲ್ಲ. ಸುಧಾಕರನ್ ಮದುವೆಗೆ ಒಂದು ಪೈಸೆಯೂ ಖರ್ಚು ಮಾಡಿಲ್ಲ. ಪಕ್ಷದ ಮುಖಂಡರೇ ಎಲ್ಲ ಖರ್ಚು ಮಾಡಿದ್ದಾರೆ. ಊಟಕ್ಕೆ ಸ್ಥಳೀಯ ರೈತರು ದಿನಸಿ ಪದಾರ್ಥ ನೀಡಿದ್ದಾರೆ.

ರಮಣಿ ಎಂಬ ಸ್ಥಳೀಯರು ರು.15 ಲಕ್ಷಕ್ಕೂ ಅಧಿಕ ಖರ್ಚು ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಮದುವೆಗೆ ರು.6.5 ಕೋಟಿ ಖರ್ಚು ಮಾಡಲಾಗಿದೆ ಎಂದು ಡಿವಿಎಸಿ ಹೇಳಿದೆ. ಆದರೆ, ಮದುವೆ ಸಂದರ್ಭದಲ್ಲಿ ಉಡುಗೊರೆಯಾಗಿ ಬಂದ ರು.6.5 ಕೋಟಿ ಮೊತ್ತದ ಬದಲಿಗೆ ಅಧೀನ ನ್ಯಾಯಾಲಯದ ನ್ಯಾ. ಕುನ್ಹಾ ಕೇವಲ ರು. 3 ಕೋಟಿ ಮೊತ್ತವನ್ನಷ್ಟೇ ಪರಿಗಣಿಸಿದ್ದಾರೆ ಎಂದು ವಾದಿಸಿದರು. ವಕೀಲರ ಸಮರ್ಥನೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ ನ್ಯಾಯಪೀಠ, ಇದು ಬೇನಾಮಿ ಆಸ್ತಿ ಪ್ರಕರಣವಲ್ಲ. ಇದು ಭ್ರಷ್ಟಾಚಾರ ನಿಗ್ರಹ ಕಾಯಿದೆಯಲ್ಲಿ ದಾಖಲಾಗಿರುವ ಪ್ರಕರಣ.

ನೀವು ಕ್ರಿಮಿನಲ್ ಪ್ರಕರಣದಲ್ಲಿ ವಾದ ಮಂಡಿಸುವ ಬದಲಿಗೆ ಪದೇ ಪದೆ ನ್ಯಾಯದೀಶರಾದ ಕುನ್ಹಾ ಅವರ ಮೇಲೆ ಆರೋಪಿಸುತ್ತಿದ್ದೀರಿ. ಮೇಲ್ಮನವಿ ವಿಚಾರಣೆ ಆರಂಭಗೊಂಡು 28 ದಿನಗಳಾಗಿದ್ದರೂ, ಒಂದೇ ಒಂದು ಸಾಕ್ಷ್ಯ ಒದಗಿಸಿಲ್ಲ. ಪ್ರಕರಣ ದಾಖಲಾಗಿ 18 ವರ್ಷಗಳಾಗಿವೆ. ಡಿವಿಎಸಿ ನೂರಾರು ಸಾಕ್ಷ್ಯಗಳನ್ನು ಕಲೆ ಹಾಕಿದೆ. ಅದಕ್ಕೆ ಪ್ರತಿಯಾಗಿ ಈವರೆಗೂ ನಿಮಗೆ ಸಾಕ್ಷಿಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ದಾಖಲೆಗಳನ್ನು ಒದಗಿಸುವಲ್ಲಿಯೂ ವಿಫಲರಾಗಿದ್ದೀರಿ. ಅನಗತ್ಯವಾಗಿ ನ್ಯಾಯಪೀಠದ ಕಾಲಹರಣ ಆಗುತ್ತಿದೆ. ಇದೇ ರೀತಿ ವಾದ ಮುಂದವರಿಸಿದಲ್ಲಿ ನ್ಯಾಯಪೀಠವೇ ಸ್ವಯಂ ಲೆಕ್ಕ ಪರಿಶೋಧಕರನ್ನು ನೇಮಿಸಿ, ಅವರು ನೀಡುವ ವರದಿ ಆಧರಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! Video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT