ಬಿಬಿಎಂಪಿ ಕಚೇರಿ 
ಜಿಲ್ಲಾ ಸುದ್ದಿ

ಬಿಬಿಎಂಪಿ ಮಳಿಗೆಗಳ ಅಕ್ರಮ ಮಾರಾಟ?

ಸುಮಾರು ರೂ.350 ಕೋಟಿ ಮೌಲ್ಯದ ಅಕ್ರಮ ಮಾರಾಟ ದಂಧೆ...

ಬೆಂಗಳೂರು: ಬಿಬಿಎಂಪಿಯ ಕೆಂಪೇಗೌಡ ಮಹಾರಾಜ ಮಾಲ್‌ನಲ್ಲಿ ಮಳಿಗೆಗಳ ಅಕ್ರಮ ಮಾರಾಟವಾಗಿದ್ದು, ಸುಮಾರು ರೂ.350 ಕೋಟಿ ಮೌಲ್ಯದ ಅಕ್ರಮ ಮಾರಾಟ ದಂಧೆ ನಡೆದಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಈ ಅಕ್ರದಲ್ಲಿ ಕೆಇಆರ್‌ಸಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್‌ಮೂರ್ತಿ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಭಾಗಿಯಾಗಿದ್ದು, ಈ ಬಗ್ಗೆ ಬಿಎಂಟಿಎಫ್‌ಗೆ ದೂರು ಸಲ್ಲಿಸಲಾಗಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಅಕ್ರಮದಲ್ಲಿ ಜನಪ್ರತಿನಿಧಿಗಳ ಹೆಸರಿನಲ್ಲಿರುವ ದೊಡ್ಡ ರಾಜಕಾರಣಿಗಳೇ ಭಾಗಿಯಾಗಿರುವುದರಿಂದ ಇದನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಪ್ಪಿಸಬೇಕು. ಹಾಗಯೇ ಬಿಬಿಎಂಪಿ ಆಯುಕ್ತರು ಪಾಲಿಕೆಯ ಆಸ್ತಿ ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸಬೇಕು. ಇಲ್ಲದಿದ್ದರೆ ಪಾಲಿಕೆ ಆಯುಕ್ತರ ವಿರುದ್ಧವೇ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಪಾಲಿಕೆಯ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಮಳಿಗೆಗಳು ಮತ್ತು ವಾಹನ ನಿಲ್ದಾಣ ಸಂಕೀರ್ಣ ನಿರ್ಮಿಸಲು 1999ರಲ್ಲಿ ಅಂದಿನ ಆಯುಕ್ತರು ತೀರ್ಮಾನಿಸಿದ್ದರು. ಅವರು ಸಲ್ಲಿಸಿದ ಪ್ರಸ್ತಾಪಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರ 2001ರಲ್ಲಿ ಅನುಮೋದನೆಯನ್ನೂ ನೀಡಿತ್ತು.

ಬಳಿಕ ಮಹಾರಾಜ ಬಿಲ್ಡ್ ಟೆಕ್ ಅಂಡ್ ಡೆವೆಲಪರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕಟ್ಟಡ ನಿರ್ಮಾಣ ಕರಾರು ಮಾಡಿಕೊಳ್ಳಲಾಯಿತು. ಅಂದರೆ ಸುಮಾರು 45,043 ಚ.ಅಡಿ ವಿಸ್ತೀರ್ಣದ ಈ ಜಾಗದಲ್ಲಿ ಮಹಾರಾಜ ಬಿಲ್ಡ್ ಟೆಕ್ ಸಂಸ್ಥೆ ಸಂಕೀರ್ಣ ನಿರ್ಮಿಸಿದರೆ, ಆ ಸಂಸ್ಥೆಗೆ ನಿರ್ಮಿತ ಪ್ರದೇಶದಲ್ಲಿ ಶೇ.17ರಷ್ಟು ಪಾಲು ನೀಡಲು ತೀರ್ಮಾನಿಸಲಾಗಿತ್ತು.

ಹೀಗಾಗಿ 83:17ರ ಅನುಪಾತದಲ್ಲಿ ಆಸ್ತಿ ಹಂಚಿಕೊಳ್ಳುವ ಕರಾರು ಪತ್ರದಲ್ಲಿ ಪಾಲಿಕೆ ಪರವಾಗಿ ಅಂದಿನ ಆಯುಕ್ತ ಅಶೋಕ್ ದಳವಾಯಿ ಸಹಿ ಮಾಡಿದ್ದರೆ, ಮಹಾರಾಜ ಬಿಲ್ಡ್ ಟೆಕ್ ಸಂಸ್ಥೆ ಪರವಾಗಿ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಹಾಗೂ ಭವರ್ ಲಾಲ್ ಎಂಬುವರು ಸಹಿ ಮಾಡಿದ್ದಾರೆ ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT