ಪತ್ತೆಯಾದ ಫಿರಂಗಿ 
ಜಿಲ್ಲಾ ಸುದ್ದಿ

ಕದಂಬರ ಕಾಲದ ಫಿರಂಗಿ ಪತ್ತೆ

ಮುಂಡೂರು ಕುಕ್ಕಿನಡ್ಕ ದೇವಳ ಬ್ರಹ್ಮಕಲಶೋತ್ಸವ ದೇವಳದ ಕಾಮಗಾರಿ ನಡೆಸುತ್ತಿದ್ದ ವೇಳೆ ಕದಂಬ...

ಪುತ್ತೂರು: ಮುಂಡೂರು ಕುಕ್ಕಿನಡ್ಕ ದೇವಳ ಬ್ರಹ್ಮಕಲಶೋತ್ಸವ ದೇವಳದ ಕಾಮಗಾರಿ ನಡೆಸುತ್ತಿದ್ದ ವೇಳೆ ಕದಂಬ ಅರಸರ ಕಾಲದಲ್ಲಿ ಬಳಸಲಾಗುತ್ತಿತ್ತು ಎನ್ನಲಾದ ಫಿರಂಗಿಯೊಂದು ಪತ್ತೆಯಾಗಿದೆ.

ಕದಂಬ ವಂಶದ ಆಳ್ವಿಕೆ ಈ ಭಾಗದಲ್ಲಿತ್ತು ಎನ್ನುವುದಕ್ಕೆ ಈ ಫಿರಂಗಿ ಸಾಕ್ಷಿಯಾಗಿದ್ದು, ಸುಮಾರು 5 ಅಡಿ ಉದ್ದ, 75 ಕೆಜಿ ಭಾರ ಹೊಂದಿದೆ. ಇದನ್ನು ದೇವ ಸ್ಥಾನದಲ್ಲಿಯೇ ಸಂರಕ್ಷಿಸಲಾಗುವುದು ಎಂದು ಮೊಕ್ತೇಸರ ಮೋನಪ್ಪ ಕರ್ಕೇರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾನ್ಯವಾಗಿ ಫಿರಂಗಿಗಳನ್ನು ಯುದ್ಧದ ಸಂದರ್ಭ ಬಳಸಲಾಗುತ್ತದೆ. ದಕ್ಷಿಣ ಕನ್ನಡಕ್ಕೆ ಕದಂಬ ವಂಶಜರು ದಂಡೆತ್ತಿ ಬಂದಿರುವ ಕುರುಹು ಇದಾಗಿರಬಹುದು ಎಂಬ ಸಂಶಯವೂ ಮೂಡಿದೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಪುರಾವೆಗಳು ಇದೇ ಭಾಗದಲ್ಲಿ ಸಿಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ದೇವಾಲಯದ ಪಕ್ಕದಲ್ಲೇ ಕಚೇರಿ ಗುಡ್ಡೆ, ದಂಡನಕುಕ್ಕು ಎಂಬ ಪ್ರದೇಶವಿದೆ.

ಅರಸರು ದಂಡಿನ ಸಮೇತ ವಿಶ್ರಾಂತಿ ಪಡೆದುಕೊಳ್ಳಲು ದಂಡನ ಕುಕ್ಕು ಪ್ರದೇಶಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಈ ಎಲ್ಲ ವಿಚಾರಗಳು ರಾಜ ವಂಶದ ಕುರುಹುಗಳಿಗೆ ಸಾಕ್ಷಿ ಎಂದು ಮೋನಪ್ಪ ಕರ್ಕೇರಾ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT