ಜಿಲ್ಲಾ ಸುದ್ದಿ

ರಾಘವೇಶ್ವರ ಶ್ರೀ ಅರ್ಜಿ ವಿಚಾರಣೆ ಇಂದು

Mainashree

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್ ಹೊಸ ವಿಭಾಗೀಯ ಪೀಠ ರಚಿಸಿದೆ.

ನ್ಯಾ. ಆನಂದ ಬೈರಾರೆಡ್ಡಿ ಹಾಗೂ ನ್ಯಾ.ಎನ್.ಆನಂದ್ ಅವರ ವಿಭಾಗೀಯ ಪೀಠ ಗುರುವಾರ ಕೋರ್ಟ್ ಕೊಠಡಿ 12ರಲ್ಲಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಈ ಹಿಂದೆ ಮೇಲ್ಮನವಿಗೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದರು.

SCROLL FOR NEXT