ಜಿಲ್ಲಾ ಸುದ್ದಿ

ದರ್ಗಾಕ್ಕೆ ಬೆಂಕಿ ಹಚ್ಚಲು ಯತ್ನ

Vishwanath S

ಶಿವಮೊಗ್ಗ: ಭದ್ರಾವತಿಯ ಹಳೇ ನಗರದ ಖಾಜೀಮುಲ್ಲಾ ಪ್ರದೇಶದಲ್ಲಿನ ಸುಮಾರು 150 ವರ್ಷಗಳ ಇತಿಹಾಸವುಳ್ಳ ಹಜರತ್ ಸೈಯದ್ ಹೈದರ್ ಮಸ್ತಾನ್ ಷಾ ಖಾದ್ರಿ ದರ್ಗಾದಲ್ಲಿ ಹಸಿರು ಬಟ್ಟೆಗೆ ದುಷ್ಕರ್ಮಿಗಳು ಬುಧವಾರ ರಾತ್ರಿ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆಸಿದ್ದು, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಭದ್ರಾವತಿ ಹಳೇ ನಗರದಲ್ಲಿನ ಖಾಜೀಮುಲ್ಲಾ ಪ್ರದೇಶದಲ್ಲಿ ಇರುವ ಈ ದರ್ಗಾಕ್ಕೆ ಹಿಂಬದಿಯಿಂದ ಪ್ರವೇಶಿಸಿರುವ ದುಷ್ಕರ್ಮಿಗಳು ಹಾಸಲಾದ ಹಸಿರು ಬಟ್ಟೆಯನ್ನು ಸುಡುವ ಪ್ರಯತ್ನ ನಡೆಸಿದ್ದಾರೆ. ಅದು ವಿಫಲವಾದ ಬಳಿಕ ಅಲ್ಲಿ ಹಾಕಲಾದ ಹೂವುಗಳನ್ನು ಕಿತ್ತೆಸೆದು, ಅಲಂಕಾರಿಕ ವಿದ್ಯುತ್ ದೀಪಗಳಿಗೆ ಕೂಡ ಹಾನಿ ಮಾಡಿದ್ದಾರೆ. ಈ ಗೋರಿ ಮೇಲೆ ಚಪ್ಪಲಿಯಿಂದ ನಡೆದಾಡಿದ ಗುರುತುಗಳು ಇವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಸ್ಥಳದಲ್ಲಿ ನೂರಾರು ಜನ ಜಮಾವಣೆಗೊಂಡಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದರು. ಪರಿಸ್ಥಿತಿ ಕೈಮೀರುವ ಸಾಧ್ಯತೆ ಕಾಣಿಸುವ ಹೊತ್ತಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ರಂಜಾನ್ ತಿಂಗಳಲ್ಲಿ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ. ಈ ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೊಕ್ಕಾಂ ಹೂಡಿದ್ದಾರೆ.

SCROLL FOR NEXT