ಜಿಲ್ಲಾ ಸುದ್ದಿ

ತುಂಟಾಟ ಮಾಡಿದ್ದಕ್ಕೆ ಮೂರು ವರ್ಷದ ಬಾಲಕನನ್ನು ಕೊಂದ 16 ಬಾಲಕ

ಸುಮಾರು 16 ವರ್ಷದ ಬಾಲಕನೊಬ್ಬ ಲಟ್ಟಣಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ.

ಬೆಂಗಳೂರು: ಮನೆಯಲ್ಲಿ ವಸ್ತುಗಳನ್ನು ಬೀಳಿಸುವುದು ಚಪ್ಪಲಿ ಎಸೆಯುವ ತುಂಟಾಟ ಮಾಡುತ್ತಿದ್ದ ಮೂರುವರೆ ವರ್ಷದ ಬಾಲಕನನ್ನು ಸುಮಾರು 16 ವರ್ಷದ ಬಾಲಕನೊಬ್ಬ ಲಟ್ಟಣಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ.

ಬೇಗೂರು ಸಮೀಪದ ಲಕ್ಕಪ್ಪ ಬಡಾವಣೆ ನ್ಯಾನಪನಹಳ್ಳಿ ನಿವಾಸಿ ರವಿ ಮತ್ತು ಶಿವಮ್ಮ ದಂಪತಿಯ ಪುತ್ರ ಪ್ರೀತಮ್ ಕೊಲೆಯಾದ ಬಾಲಕ. ಕೃತ್ಯ ಎಸಗಿದ ಮೈಸೂರು ಜಿಲ್ಲೆ ಕೆ.ಆರ್ ನಗರದ ಸುಮಾರು 16 ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿರುವ ರವಿ ಮತ್ತು ಶಿವಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಾಸನ ಮೂಲದ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದು ನೆಲೆಸಿದ್ದರು. ಇವರ ದೂರದ ಸಂಬಧಿ ಪ್ರೌಢಶಾಲೆ ಹಂತದಲ್ಲಿ ವ್ಯಾಸಂಗ ನಿಲ್ಲಿಸಿರುವ ಆರೋಪಿ ಬಾಲಕ ಕೂಡಾ ಮೂರು ತಿಂಗಳ ಹಿಂದೆ ನಗರಕ್ಕೆ ಬಂದು ಹೊಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜತೆ ನ್ಯಾನಪ್ಪನಹಳ್ಳಿಯಲ್ಲೇ ಮನೆಯೊಂದರಲ್ಲಿ ವಾಸವಿದ್ದ. ಶಿವಮ್ಮ ಅವರಿಗೆ ಸಂಬಂಧಿಯಾದ ಆರೋಪಿ ಬಾಲಕ ಆಗಾಗ್ಗೆ ಅವರ ಮನೆಗೆ ಬಂದು ಪ್ರೀತಮ್ ಗೆ ಪಾಠ ಹೇಳಿಕೊಡುವುದು ಆಟವಾಡಿಸುವುದು ಮಾಡುತ್ತಿದ್ದ.

ಪ್ರೀತಮ್ ತಂದೆ ರವಿ ಕೆಲಸದ ಮೇಲೆ ಹೋಗಿದ್ದರು. ಮಧ್ಯಾಹ್ನ 2 ಗಂಟೆಯಲ್ಲಿ ಮನೆಗೆ ಬಂದ ಆರೋಪಿ ಬಾಲಕ ಪಾಠ ಹೇಳಿಕೊಡುವುದಾಗಿ ತಾಯಿ ಶಿವಮ್ಮಗೆ ಹೇಳಿ ಪ್ರೀತಮ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ ಮಧ್ಯಾಹ್ನ 3 ಗಂಟೆಗೆ ಶಿವಮ್ಮ ಅವರು ಮಗನನ್ನು ಕರೆದುಕೊಂಡು ಬರುವಂತೆ ಮಗಳು ಪೃಥ್ವಿಗೆ  ಹೇಳಿದ್ದರು. ಆರೋಪಿಯ ಮನೆಗೆ ಸಹೋದರಿ ಹೋದಾಗ ಆಟ ಲಟ್ಟಣಿಗೆಯಿಂದ ಪ್ರೀತಮ್ ಗೆ ಹೊಡೆಯುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ ಭಯಗೊಂಡ ಪೃಥ್ವಿ ಮನೆಗೆ ಹೋಗಿ ತಾಯಿಗೆ ವಿಷಯ ತಿಳಿಸಿದ್ದಳು. ಶಿವಮ್ಮ ತಮ್ಮ ಮಗನನ್ನು ಕರೆತರಲು ಆರೋಪಿ ಮನೆಗೆ ಹೋಗಿದ್ದರು. ಈ ವೇಳೆ ಆತ ಪ್ರೀತಮ್ ಓದಿಕೊಳ್ಳುತಿದ್ದಾನೆ. ಸಂಜೆ ತಾನೇ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಕಳಿಸಿದ್ದ.

ಸಂಜೆ 5 ಗಂಟೆಯಾದರೂ ಮಗ ಪ್ರೀತಮ್ ಮನೆಗೆ ವಾಪಸ್ಸಾಗದೇ ಇದ್ದರಿಂದ ಪೋಷಕರು ಮತ್ತೆ ಆರೋಪಿಯ ಮನೆಗೆ ಹೋಗಿದ್ದಾರೆ. ಈ ವೇಳೆ ಪ್ರೀತಮ್ ಅಸ್ವಸ್ಥನಾಗಿ ಬಿದ್ದಿದ್ದು ಮೈಮೇಲೆ ಚುಚ್ಚಿದ ಗಾಯಗಳಾಗಿದ್ದವು. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಹಲ್ಲೆ ನಡೆಸಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅತಿಯಾಗಿ ತುಂಟಾಟ ಮಾಡುತ್ತಿದ್ದ ಕಾರಣ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT