ಜಿಲ್ಲಾ ಸುದ್ದಿ

ತುಂಟಾಟ ಮಾಡಿದ್ದಕ್ಕೆ ಮೂರು ವರ್ಷದ ಬಾಲಕನನ್ನು ಕೊಂದ 16 ಬಾಲಕ

ಸುಮಾರು 16 ವರ್ಷದ ಬಾಲಕನೊಬ್ಬ ಲಟ್ಟಣಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ.

ಬೆಂಗಳೂರು: ಮನೆಯಲ್ಲಿ ವಸ್ತುಗಳನ್ನು ಬೀಳಿಸುವುದು ಚಪ್ಪಲಿ ಎಸೆಯುವ ತುಂಟಾಟ ಮಾಡುತ್ತಿದ್ದ ಮೂರುವರೆ ವರ್ಷದ ಬಾಲಕನನ್ನು ಸುಮಾರು 16 ವರ್ಷದ ಬಾಲಕನೊಬ್ಬ ಲಟ್ಟಣಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ.

ಬೇಗೂರು ಸಮೀಪದ ಲಕ್ಕಪ್ಪ ಬಡಾವಣೆ ನ್ಯಾನಪನಹಳ್ಳಿ ನಿವಾಸಿ ರವಿ ಮತ್ತು ಶಿವಮ್ಮ ದಂಪತಿಯ ಪುತ್ರ ಪ್ರೀತಮ್ ಕೊಲೆಯಾದ ಬಾಲಕ. ಕೃತ್ಯ ಎಸಗಿದ ಮೈಸೂರು ಜಿಲ್ಲೆ ಕೆ.ಆರ್ ನಗರದ ಸುಮಾರು 16 ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿರುವ ರವಿ ಮತ್ತು ಶಿವಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಾಸನ ಮೂಲದ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದು ನೆಲೆಸಿದ್ದರು. ಇವರ ದೂರದ ಸಂಬಧಿ ಪ್ರೌಢಶಾಲೆ ಹಂತದಲ್ಲಿ ವ್ಯಾಸಂಗ ನಿಲ್ಲಿಸಿರುವ ಆರೋಪಿ ಬಾಲಕ ಕೂಡಾ ಮೂರು ತಿಂಗಳ ಹಿಂದೆ ನಗರಕ್ಕೆ ಬಂದು ಹೊಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜತೆ ನ್ಯಾನಪ್ಪನಹಳ್ಳಿಯಲ್ಲೇ ಮನೆಯೊಂದರಲ್ಲಿ ವಾಸವಿದ್ದ. ಶಿವಮ್ಮ ಅವರಿಗೆ ಸಂಬಂಧಿಯಾದ ಆರೋಪಿ ಬಾಲಕ ಆಗಾಗ್ಗೆ ಅವರ ಮನೆಗೆ ಬಂದು ಪ್ರೀತಮ್ ಗೆ ಪಾಠ ಹೇಳಿಕೊಡುವುದು ಆಟವಾಡಿಸುವುದು ಮಾಡುತ್ತಿದ್ದ.

ಪ್ರೀತಮ್ ತಂದೆ ರವಿ ಕೆಲಸದ ಮೇಲೆ ಹೋಗಿದ್ದರು. ಮಧ್ಯಾಹ್ನ 2 ಗಂಟೆಯಲ್ಲಿ ಮನೆಗೆ ಬಂದ ಆರೋಪಿ ಬಾಲಕ ಪಾಠ ಹೇಳಿಕೊಡುವುದಾಗಿ ತಾಯಿ ಶಿವಮ್ಮಗೆ ಹೇಳಿ ಪ್ರೀತಮ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ ಮಧ್ಯಾಹ್ನ 3 ಗಂಟೆಗೆ ಶಿವಮ್ಮ ಅವರು ಮಗನನ್ನು ಕರೆದುಕೊಂಡು ಬರುವಂತೆ ಮಗಳು ಪೃಥ್ವಿಗೆ  ಹೇಳಿದ್ದರು. ಆರೋಪಿಯ ಮನೆಗೆ ಸಹೋದರಿ ಹೋದಾಗ ಆಟ ಲಟ್ಟಣಿಗೆಯಿಂದ ಪ್ರೀತಮ್ ಗೆ ಹೊಡೆಯುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ ಭಯಗೊಂಡ ಪೃಥ್ವಿ ಮನೆಗೆ ಹೋಗಿ ತಾಯಿಗೆ ವಿಷಯ ತಿಳಿಸಿದ್ದಳು. ಶಿವಮ್ಮ ತಮ್ಮ ಮಗನನ್ನು ಕರೆತರಲು ಆರೋಪಿ ಮನೆಗೆ ಹೋಗಿದ್ದರು. ಈ ವೇಳೆ ಆತ ಪ್ರೀತಮ್ ಓದಿಕೊಳ್ಳುತಿದ್ದಾನೆ. ಸಂಜೆ ತಾನೇ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಕಳಿಸಿದ್ದ.

ಸಂಜೆ 5 ಗಂಟೆಯಾದರೂ ಮಗ ಪ್ರೀತಮ್ ಮನೆಗೆ ವಾಪಸ್ಸಾಗದೇ ಇದ್ದರಿಂದ ಪೋಷಕರು ಮತ್ತೆ ಆರೋಪಿಯ ಮನೆಗೆ ಹೋಗಿದ್ದಾರೆ. ಈ ವೇಳೆ ಪ್ರೀತಮ್ ಅಸ್ವಸ್ಥನಾಗಿ ಬಿದ್ದಿದ್ದು ಮೈಮೇಲೆ ಚುಚ್ಚಿದ ಗಾಯಗಳಾಗಿದ್ದವು. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಹಲ್ಲೆ ನಡೆಸಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅತಿಯಾಗಿ ತುಂಟಾಟ ಮಾಡುತ್ತಿದ್ದ ಕಾರಣ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT