ಸಫಿಯಾ ಕೊಲೆಗಾರನಿಗೆ ಮರಣದಂಡನೆ ಶಿಕ್ಷೆ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಸಫಿಯಾ ಕೊಲೆಗಾರನಿಗೆ ಮರಣದಂಡನೆ ಶಿಕ್ಷೆ

ಕೊಡಗು ಜಿಲ್ಲೆಯ ಅಯ್ಯಂಗೇರಿ ಮೂಲದ ಸಫಿಯಾ ಎಂಬ 14 ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಉದ್ಯಮಿ ಕೆ.ಸಿ. ಹಂಸ (54) ಎಂಬುವರಿಗೆ ಗುರುವಾರ ಕಾಸರಗೋಡು ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ...

ಮಡಿಕೇರಿ: ಕೊಡಗು ಜಿಲ್ಲೆಯ ಅಯ್ಯಂಗೇರಿ ಮೂಲದ ಸಫಿಯಾ ಎಂಬ 14 ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಉದ್ಯಮಿ ಕೆ.ಸಿ. ಹಂಸ (54) ಎಂಬುವರಿಗೆ ಗುರುವಾರ ಕಾಸರಗೋಡು ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.

ಕಾಸರಗೋಡಿನಲ್ಲಿ ಮನೆ ಕೆಲಸಕ್ಕಿದ್ದ ಸಫಿಯಾಳನ್ನು 9 ವರ್ಷಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಗೆ ಹಂಸನಿಗೆ ಸಹಕಾರ ನೀಡಿದ ಕೆ.ಸಿ. ಹಂಸನ ಪತ್ನಿ ಮೈಮುನಾ (40) ಮತ್ತು ಅಯ್ಯಂಗೇರಿ ಗ್ರಾಮದ ಮೊಯ್ದು ಹಾಜಿಗೆ 3 ವರ್ಷಗಳ ಸೆರೆವಾಸ ಶಿಕ್ಷೆ
ವಿಧಿಸಲಾಗಿದೆ.

ಏನಿದು ಪ್ರಕರಣ?: ಕಾಸರಗೋಡಿನ ಉದ್ಯಮಿ ಹಂಸ ಎಂಬುವರ ಮನೆಗೆ ಅಯ್ಯಂಗೇರಿಯಿಂದ ಕೆಲಸಕ್ಕೆಂದು ಸಫಿಯಾ ತಂಗಿದ್ದಳು. ಹಂಸ ಗೋವಾದಲ್ಲಿ ಹೊಸದಾಗಿ ಕೊಂಡೊಕೊಂಡಿದ್ದ ಬಂಗಲೆಯ ಮನೆ ಕೆಲಸಕ್ಕೆಂದು ಸಫಿಯಾಳನ್ನು ಕರೆದೊಯ್ದಿದ್ದ. ಅಲ್ಲಿ ಆಕೆಗೆ ನಿರಂತರ ಕಿರುಕುಳ, ದೌರ್ಜನ್ಯವೆಸಗುತ್ತಿದ್ದ. ಅಡುಗೆ ಮನೆಯಲ್ಲಿ ಕುದಿಯುವ ಗಂಜಿಯನ್ನು ಕೈಮೇಲೆ ಚೆಲ್ಲಿಕೊಂಡ ಸಫಿಯಾಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬದಲು, ಪ್ರಜ್ಞೆ ತಪ್ಪಿದ ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ ಚಾಕುವಿನಿಂದ ಮೂರು ತುಂಡುಗಳಾಗಿ ಕತ್ತರಿಸಿದ್ದರು. ಬಳಿಕ ಶವದ ಮೂರು ಭಾಗಗಳನ್ನು ತಾನು ಹೊಸದಾಗಿ ಕಟ್ಟುತ್ತಿದ್ದ ಅಪಾರ್ಟ್‍ಮೆಂಟ್ ಕಟ್ಟಡದ ಮಣ್ಣಿನೊಳಗೆ ಹೂತುಹಾಕಿದ್ದರು. ಆದರೆ, ಈ ಕುರಿತು ಸುಳಿವು ಪಡೆದ ಕಾಸರಗೋಡು ವೊಲೀಸರು ಹಲವು ವರ್ಷ ಪ್ರಕರಣದ ಹಿಂದೆ ಬಿದ್ದು ಸಫಿಯಾಳ ಮೂಳೆಗಳನ್ನು ಪತ್ತೆಹಚ್ಚಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT