ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ 
ಜಿಲ್ಲಾ ಸುದ್ದಿ

ಮಾವಳ್ಳಿ ಬಿಸಿಲು ಮಾರಮ್ಮ ದೇವಿ ಹಬ್ಬದಲ್ಲಿ ಪ್ರಾಣಿ ಬಲಿ ಬೇಡ: ದಯಾನಂದ ಸ್ವಾಮೀಜಿ

ನಗರದ ಮಾವಳ್ಳಿ ಬಿಸಿಲು ಮಾರಮ್ಮ ಹಾಗೂ ಆರ್.ವಿ. ರಸ್ತೆಯ ಬಿಸಿಲು ಮಾರಮ್ಮ ದೇವಿ ಹಬ್ಬದಲ್ಲಿ ಪ್ರಾಣಿಬಲಿ ಆಚರಣೆ...

ಬೆಂಗಳೂರು: ನಗರದ ಮಾವಳ್ಳಿ ಬಿಸಿಲು ಮಾರಮ್ಮ ಹಾಗೂ ಆರ್.ವಿ. ರಸ್ತೆಯ ಬಿಸಿಲು ಮಾರಮ್ಮ ದೇವಿ ಹಬ್ಬದಲ್ಲಿ ಪ್ರಾಣಿಬಲಿ ಕೊಡುವ ಆಚರಣೆಯನ್ನು ಭಕ್ತರು ಕೈಬಿಡಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.8ರಿಂದ 11ರವರೆಗೆ ಈ ದೇವಸ್ಥಾನದಲ್ಲಿ ದೇವಿ ಹಬ್ಬ ನಡೆಯಲಿದೆ. ದೇವಿಯ ಮೆರವಣಿಗೆಯ ಸಂದರ್ಭದಲ್ಲಿ ಕುರಿ, ಕೋಳಿ, ಆಡು ಮುಂತಾದ ನೂರಾರು ಪ್ರಾಣಿಗಳ ಬಲಿಯನ್ನು ಹರಕೆಯ ರೂಪದಲ್ಲಿ ನೀಡಲಾಗುತ್ತದೆ. ಪ್ರಾಣಿಗಳ ರಕ್ತದೋಕುಳಿ ಹಾಗೂ ಬಲಿಗೆ ಬದಲಾಗಿ ಅರಿಶಿನ, ಕುಂಕುಮ, ಬೂದುಗುಂಬಕಾಯಿ, ತೆಂಗಿನ ಕಾಯಿ, ನಿಂಬೆಹಣ್ಣು, ಬಾಳೆಹಣ್ಣು, ಹೋಳಿಗೆ ಕಡುಬು ಮುಂತಾದ ಪದಾರ್ಥಗಳನ್ನು ದೇವಿಗೆ ನೈವೇದ್ಯ ಸಲ್ಲಿಸುವುದರ ಮೂಲಕ ಹಬ್ಬ ಆಚರಿಸಬೇಕು ಎಂದಿದ್ದಾರೆ.

ಭಕ್ತರು ಮತ್ತು ಬಿಸಿಲು ಮಾರಮ್ಮ ಆಡಳಿತ ಮಂಡಳಿಯು ಪ್ರಾಣಿ ಬಲಿ ತ್ಯಜಿಸಿ ಸಾತ್ವಿಕ ಪೂಜೆ ಸಲ್ಲಿಸಲು ಮುಂದಾಗಬೇಕು ಹಾಗು ದೇವಾಲಯಗಳನ್ನು ವಧಾಲಯ ಮಾಡದೆ ದಿವ್ಯಾಲಯವನ್ನಾಗಿಸಬೇಕು. ಭಕ್ತರು ಜೀವ ಹಿಂಸಾತ್ಮಕ ಪ್ರಾಣಿಬಲಿಯಂತಹ ಕ್ರೂರ ಹರಕೆಯನ್ನು ಕೈಬಿಟ್ಟು ಜೀವ ಪರವಾದ, ಮಾನವೀಯತೆಯಿಂದ ಕೂಡಿರುವ ಹರಕೆಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯವರು ಜಾಗೃತಿ ಮೂಡಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಾಣಿ ಬಲಿ 1959ರ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ರಾಜ್ಯದಲ್ಲಿ ಸಾವಿರಾರು ದೇವಾಲಯಗಳಲ್ಲಿ ಹಬ್ಬ ಜಾತ್ರೆಗಳಲ್ಲಿ ಪ್ರತಿವರ್ಷ ಅಂದಾಜು 1 ಕೋಟಿಗೂ ಹೆಚ್ಚು ಪ್ರಾಣಿಗಳನ್ನು ಬಲಿ ನೀಡಲಾಗುತ್ತಿದೆ. ಧಾರ್ಮಿಕ ಜಗತ್ತಿನಲ್ಲಿ ಇದೊಂದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ಸ್ವಾಮೀಜಿ ಹೇಳಿದರು
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT