ಹವಾಲಾ ವಹಿವಾಟು: ನಾಲ್ವರ ಬಂಧನ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಹವಾಲಾ ವಹಿವಾಟು: ನಾಲ್ವರ ಬಂಧನ

ಹವಾಲಾ ಹಣ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ರು.17.60 ಲಕ್ಷ ನಗದು ಹಾಗೂ 3 ಕೆಜಿ 160 ಗ್ರಾಂ ಬೆಳ್ಳಿಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ...

ಬೆಂಗಳೂರು: ಹವಾಲಾ ಹಣ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ರು.17.60 ಲಕ್ಷ ನಗದು ಹಾಗೂ 3 ಕೆಜಿ 160 ಗ್ರಾಂ ಬೆಳ್ಳಿಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಪೇಟೆ ಜಿಕೆ ಟೆಂಪಲ್ ಸ್ಟ್ರೀಟ್ ರಸ್ತೆಯ ಮಾಂಗಿಲಾಲ್ ಜೈನ್ (53), ರಮೇಶ್ ಕುಮಾರ್ (49), ಯಲಹಂಕ ನಂಜುಂಡಪ್ಪ ಬಡಾವಣೆಯ ರಾಣಾ ರಾಮ್ ಹಾಗೂ ಮಾಮೂಲ್ ಪೇಟೆ ಎಂಆರ್ ಲೈನ್‍ನ ಬಾಬುಲಾಲ್ ಸುತಾರ್ (38) ಬಂಧಿತರು. ಆರೋಪಿಗಳು ಹಳೇ ತರಗುಪೇಟೆ ಕ್ರಾಸ್ ರಸ್ತೆಯಲ್ಲಿ ಎಂ.ಎಂ. ಗಾರ್ಮೆಂಟ್ಸ್ ಮತ್ತು ರೆಡಿಮೇಡ್ ಅಂಗಡಿಯಲ್ಲಿ ಹವಾಲಾ ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಹಣ ಹಾಗೂ ಬೆಳ್ಳಿ ಗಟ್ಟಿ ಜತೆಗೆ 4 ಮೊಬೈಲ್ ಫೋನ್, 28 ಬ್ಯಾಂಕ್ ಪಾಸ್ ಪುಸ್ತಕಗಳು, ಹವಾಲಾ ಹಣ ಸಾಗಣೆ ಬಗ್ಗೆ ಬರೆದಿಟ್ಟಿದ್ದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸರ್ಕಾರದಿಂದ ಅ„ಕೃತ ಪರವಾನಗಿ ಪಡೆಯದೆ ಸಂಘಟಿತ ರೀತಿಯಲ್ಲಿ ಲಕ್ಷಾಂತರ ಹಣವನ್ನು ನಗರದ ವಿವಿಧ ವ್ಯಾಪಾರಿಗಳಿಂದ ಸಂಗ್ರಹಿಸಿ ಹವಾಲಾ ಮೂಲಕ ಹೊರ ರಾಜ್ಯಗಳ ವ್ಯಾಪಾರಿಗಳಿಗೆ ಕಳುಹಿಸುತ್ತಿದ್ದರು. ಇವರ ಬಳಿಗೆ ಹಲವು ವ್ಯಾಪಾರಸ್ಥರು ಹಣ ನೀಡುತ್ತಿದ್ದರು. ಮುಂಬೈ, ರಾಜಸ್ಥಾನ, ಕೊಲ್ಕತಾ ಸೇರಿದಂತೆ ಹೊರ ರಾಜ್ಯಗಳಲ್ಲಿರುವ ವ್ಯಾಪಾರಿಗಳಿಗೆ ಅಕ್ರಮವಾಗಿ ಹಣ ಸಾಗಣೆಯಾಗುತ್ತಿತ್ತು. ಆರೋಪಿಗಳು ಪ್ರತಿ ರು.1 ಲಕ್ಷ ಹವಾಲಾ ಹಣ ಸಾಗಾಣೆಗೆ ರು.200 ರಿಂದ ರು.300 ಕಮೀಷನ್ ಪಡೆದುಕೊಳ್ಳುತ್ತಿದ್ದರು. ಕೆಲ ವ್ಯಾಪಾರಿಗಳು
ಬೆಳ್ಳಿಗಟ್ಟಿಗಳನ್ನು ಅಕ್ರಮವಾಗಿ ತರಿಸಿಕೊಳ್ಳುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಎಂ.ಆರ್. ಹೊಸೈರಿ ರೆಡಿಮೇಡ್ ಅಂಗಡಿ ಮಾಲೀಕ ರಮೇಶ್ ಕುಮಾರ್ ಎಂಬಾತ ಹವಾಲಾ ದಂಧೆಯ ಪ್ರಮುಖ ಆರೋಪಿಯÁಗಿದ್ದು ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT