ಜಿಲ್ಲಾ ಸುದ್ದಿ

ಮಂಗಳೂರು-ಹಾಸನ ನಡುವೆ ಹಳಿ ತಪ್ಪಿದ ಬೆಂಗಳೂರು ಎಕ್ಸ್‌ಪ್ರೆಸ್

Lingaraj Badiger

ಕೊಝಿಕೊಡ: ಕಣ್ಣೂರು/ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸೋಮವಾರ ಬೆಳಗಿನ ಜಾವ ಮಂಗಳೂರು-ಹಾಸನ ನಡುವೆ ಶಿರಿವಾಗಿಲು ಬಳಿ ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಎರಡು ಇಂಜಿನ್‌ಗಳು ಹಾಗೂ ಒಂದು ಸಾಮಾನ್ಯ ಕೋಚ್ ಹಳಿ ತಪ್ಪಿದ್ದು, ಅವಘಡದಿಂದಾಗಿ ಕೆಲಕಾಲ ರೈಲು ಸಂಚಾರಕ್ಕೆ ಅಡ್ಡಿಯಾಗಿತ್ತು ಎಂದು ದಕ್ಷಿಣ ರೇಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಹಳಿ ತಪ್ಪಿದ ರೈಲಿನ ಪ್ರಯಾಣಿಕರಿಗೆ ರಸ್ತೆಯ ಮೂಲಕ ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಪರ್ಯಾಯ ವ್ಯವಸ್ಥೆ ಮಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SCROLL FOR NEXT