ಜಿಲ್ಲಾ ಸುದ್ದಿ

ನೀರಿಗೆ ಬಿದ್ದು ಬಾಲಕ ಸಾವು

ಬೆಂಗಳೂರು: ಸ್ನೇಹಿತರೊಂದಿಗೆ ಈಜಲು ಹೋಗಿದ್ದ 5ನೇ ತರಗತಿ ವಿದ್ಯಾರ್ಥಿ ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಮತ್ತಿಕೆರೆಯ ಜೆ.ಪಿ.ಪಾರ್ಕ್ ಸಮೀಪ ನಡೆದಿದೆ.

ಘಟನೆ ಮತ್ತಿಕೆರೆಯ ಜೆ.ಪಿ.ಪಾರ್ಕ್ ಸಮೀಪ ನಡೆದಿದೆ. ಗೊರಗುಂಟೆಪಾಳ್ಯ ನಿವಾಸಿ ವೆಂಕಟೇಶ್, ರಂಗಮ್ಮ ದಂಪತಿಯ ಪುತ್ರ ಪವನ್(9) ಮೃತ ವಿದ್ಯಾರ್ಥಿ. ಮಧ್ಯಾಹ್ನ ಗೆಳೆಯರ ಜತೆ ಜೆ.ಪಿ. ಪಾರ್ಕ್‍ಗೆ ಹೊಂದಿಕೊಂಡಂತೆ ಇರುವ ರೈಲ್ವೆ ಹಳಿಯ ಸಮೀಪದ ನೀರಿನ ಗುಂಡಿಯಲ್ಲಿ ಈಜಾಡಲು ಹೋಗಿದ್ದ. ಗುಂಡಿಯಲ್ಲಿ ಜೊಂಡು, ಹೂಳು ತುಂಬಿದ್ದು ಈಜಾಡಲು ಸಾಧ್ಯವಾಗದೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT