ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಆನ್‍ಲೈನ್‍ನಲ್ಲೇ ಮಾಲಿನ್ಯ ಮಾಹಿತಿ

ಕೈಗಾರಿಕಾ ಮಾಲಿನ್ಯ ಎಷ್ಟಿದೆ ಎಂದು ತಿಳಿಯೋದು, ನಿಯಂತ್ರಣ ಮಾಡೋದು ಈಗ ಸರಾಗ. ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಆನ್ ಲೈನ್ ವ್ಯವಸ್ಥೆ. ರಾಜ್ಯದ ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯಗಳ ಮಾಲಿನ್ಯ ಪ್ರಮಾಣವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ...

ಬೆಂಗಳೂರು: ಕೈಗಾರಿಕಾ ಮಾಲಿನ್ಯ ಎಷ್ಟಿದೆ ಎಂದು ತಿಳಿಯೋದು, ನಿಯಂತ್ರಣ ಮಾಡೋದು ಈಗ ಸರಾಗ. ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಆನ್ ಲೈನ್ ವ್ಯವಸ್ಥೆ. ರಾಜ್ಯದ ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯಗಳ ಮಾಲಿನ್ಯ ಪ್ರಮಾಣವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆನ್‍ಲೈನ್‍ನಲ್ಲೇ ನಿಯಂತ್ರಿಸಲಿದೆ.

ಇದುವರೆಗೂ ಮಂಡಳಿಯು ಮಾಲಿನ್ಯದ ಪ್ರಮಾಣವನ್ನು ಆಯಾ ಸಂಸ್ಥೆ ಮತ್ತು ಸಿಬ್ಬಂದಿ ವರ್ಗದಿಂದ ಮಾಹಿತಿ ಕಲೆ ಹಾಕುತ್ತಿತ್ತು. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿತ್ತು ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದಿದ್ದಾರೆ ಮಂಡಳಿಯ ಅಧ್ಯಕ್ಷ ಡಾ.ವಾಮನ್ ಆಚಾರ್ಯ. ಮಂಡಳಿಯ ಕೈಗಾರಿಕೆಗಳ ಮಾಲಿನ್ಯದ ಪ್ರಮಾಣವನ್ನು ಸರಿಯಾದ ಸಮಯಕ್ಕೆ ಗಮನಿಸುವುದು. ಅವುಗಳ ಮೇಲೆ ನಿಗಾ ಇಡಲು ಸಹಾಯವಾಗುತ್ತದೆ. ಕೈಗಾರಿಕೆಗಳಿಗೆ ನೀಡುವ ಪರವಾನಗಿ 5 ವರ್ಷಗಳಿಗೆ ವಿಸ್ತರಿಸಿದ ಬೆನ್ನಲ್ಲೇ ಮಾಲಿನ್ಯ ಪ್ರಮಾಣವನ್ನು ನಿತ್ಯ ಗಮನಿಸಲು ಈ ವ್ಯವಸ್ಥೆ ತರಲಾಗಿದೆ. ಕಿಯಾನಿಕ್ಸ್ ಸಹಕಾರದೊಂದಿಗೆ ಈ ತಂತ್ರಜ್ಞಾನ ರೂಪಿಸಿದ್ದು, ಮಾಲಿನ್ಯ ಪ್ರಮಾಣ ಗಮನಿಸಲು ಮಂಡಳಿಯ ಮುಖ್ಯ ಕಚೇರಿಯಲ್ಲಿ ಒಂದು ದೊಡ್ಡ ಕಂಪ್ಯೂಟರ್ ಪರದೆಯನ್ನು ಸ್ಥಾಪಿಸಲಾಗಿದೆ.

ಕೀಟನಾಶಕ, ಔಷಧ, ತಿರುಳು ಮತ್ತು ಕಾಗದ, ಸತು, ತಾಮ್ರ, ಅಲ್ಯುಮಿನಿಯಂ, ಟೈ-ಡೈ, ಕ್ಲೊರೈಡ್, ಸಕ್ಕರೆ, ಡಿಸ್ಟಿಲರಿ, ಟ್ಯಾನರಿ, ವಿದ್ಯುತ್, ಸಿಮೆಂಟ್, ರಸಗೊಬ್ಬರ, ಉಕ್ಕು ಮತ್ತು ಕಬ್ಬಿಣ, ತೈಲ ಸಂಸ್ಕರಣೆ, ಪೆಟ್ರೋಕೆಮಿಕಲ್ ರಂಗ ಸೇರಿದಂತೆ ರಾಜ್ಯದ ಒಟ್ಟು 271 ಉದ್ಯಮಗಳನ್ನು ಆನ್‍ಲೈನ್ ವ್ಯಾಪ್ತಿಗೆ ತರಲಾಗಿದೆ.ಮಾಹಿತಿಯನ್ನು ಆಯಾ ಉದ್ಯಮಗಳೇ ಮಾಡಬೇಕು. ಇದಕ್ಕೆ ತಂತ್ರಜ್ಞಾನದ ನೆರವನ್ನು ಮಂಡಳಿ ಒದಗಿಸುತ್ತದೆ. ಈ ವ್ಯವಸ್ಥೆಯಲ್ಲಿ ತಾಜ್ಯ ಹೊರಸೂಸುವಿಕೆಯನ್ನು ದಿನದ 24 ಗಂಟೆಯೂ ಗಮನಿಸಬಹುದು. ಇಲ್ಲಿ ಯಾವುದೇ ಮಾಲಿನ್ಯದ ಮಿತಿಯು ಸೂಚಿತ ಮಟ್ಟಕ್ಕಿಂತ ಶೇಕಡಾ 10ಕ್ಕಿಂತ ಹೆಚ್ಚಾಗಿರುವುದು ಕಂಡುಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಲಾಗುವುದು. ಆನ್‍ಲೈನ್‍ನಲ್ಲಿ ಸಂಗ್ರಹಿಸಿದ ದತ್ತಾಂಶ ವಿಶ್ಲೇಷಿಸಿ, ಕ್ರಮ ಕೈಗೊಳ್ಳಲು ಪ್ರತ್ಯೇಕ ಏರ್‍ಕೇರ್ ಕೇಂದ್ರ ರಚಿಸಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಕ್ಷೇತ್ರ ಮತ್ತು ಭದ್ರಾವತಿಯನ್ನು ತೀವ್ರ ಮಾಲಿನ್ಯದ ಸ್ಥಳಗಳೆಂದು ಗುರುತಿಸಲಾಗಿದೆ. ಅಲ್ಲದೆ ತುಂಗಭದ್ರಾ ನದಿ (ಹರಿಹರ), ಭದ್ರಾ ನದಿ, ಹಲಸೂರು ಕೆರೆ, ಹೆಬ್ಬಳ್ಳ ಕಣಿವೆ (ಮಂಡ್ಯ) ನದಿಗಳನ್ನೂ ತೀವ್ರ ಮಾಲಿನ್ಯದ ತಟಗಳಾಗಿ ಕೇಂದ್ರವು ಗುರುತಿಸಿದ್ದು ಇಲ್ಲಿಯೂ ಮಾಲಿನ್ಯನಿಗಾ ಇಟ್ಟು ಆನ್‍ಲೈನ್ ಮಾಹಿತಿ ಸಂಗ್ರಹಣೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT