ಜಿಲ್ಲಾ ಸುದ್ದಿ

ಶಿವಪುರ ಕೆರೆಯಲ್ಲಿ ನಗರದ ಬಾಲಕ ಮುಳುಗಿ ಸಾವು

ದೊಡ್ಡಬಳ್ಳಾಪುರ: ಬೆಂಗಳೂರು ನಗರದ ಟ್ಯಾನರಿ ರಸ್ತೆಯ 17ವರ್ಷದ ಬಾಲಕನೋರ್ವ ದೊಡ್ಡ ಬಳ್ಳಾಪುರದ ಶಿವಪುರದ ಕೆರೆಯಲ್ಲಿ ಈಜಲು  ಹೋಗಿ ಸಾವನಪ್ಪಿರುವ ಘಟನೆ ನಡೆದಿದೆ.

ಅಗ್ನಿಶಾಮಕ ದಳ ಮತ್ತು ಸ್ಥಳೀಯ ನಾಗರೀಕರ ಸತತ 5ಗಂಟೆಗಳ ತೀವ್ರ ಶೋಧದ ನಂತರ ಮೃತ ಬಾಲಕ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮೃತ  ಯುವಕನನ್ನು ಬೆಂಗಳೂರು ಟ್ಯಾನರಿ ರಸ್ತೆಯ ನಿವಾಸಿ ಸದ್ದಾಂ (17) ಎಂದು ಗುರುತಿಸಿಲಾಗಿದೆ.

ಮೃತನು ಬೆಂಗಳೂರಿನ ಖಾಸಗಿ ಪ್ರೌಢಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ  ಉತ್ತೀರ್ಣನಾಗಿದ್ದ. ಶಿಬಿರಕ್ಕೆ ಬಂದಿದ್ದ: ತಾಲೂಕಿನ ಶಿವಪುರದ ಮಸೀದಿಯಲ್ಲಿ ನಡೆಯುತ್ತಿರುವ 40 ದಿನಗಳ ಧರ್ಮ ಉಪನ್ಯಾಸ ಶಿಬಿರದಲ್ಲಿ  ಪಾಲ್ಗೊಳ್ಳಲು ಬೆಂಗಳೂರಿನ ಟ್ಯಾನರಿ ರಸ್ತೆಯ 9 ಮಂದಿ ಬಾಲಕರು ಆಗಮಿಸಿದ್ದರು. ಬುಧವಾರ ಮಧ್ಯಾಹ್ನ 2ಗಂಟೆ ಸುಮಾರಿನಲ್ಲಿ ಉಪನ್ಯಾಸ  ಮುಗಿಸಿ 4ಮಂದಿ ಬಾಲಕರು ಕೆರೆಯಲು ಈಜಲು ಹಾದಾಗ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

SCROLL FOR NEXT