ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಕನ್ನಡ ಸಾಂಸ್ಕೃತಿಕ ಲೋಕದ ಅನಾವರಣ

ಅಲ್ಲಿ ನಾಡಿನ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕವೇ ನೆರೆದಿತ್ತು. ಕರುನಾಡು ಗ್ರಾಮೀಣ ಕಲೆಗಳಿಗೆ ಮನಸೋತ ಐಟಿ-ಬಿಟಿ ಜನರು ಜಾನಪದ ಕಲೆಗಳ ನೃತ್ಯ, ಕುಣಿತವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು..

ಬೆಂಗಳೂರು: ಅಲ್ಲಿ ನಾಡಿನ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕವೇ ನೆರೆದಿತ್ತು. ಕರುನಾಡು ಗ್ರಾಮೀಣ ಕಲೆಗಳಿಗೆ ಮನಸೋತ ಐಟಿ-ಬಿಟಿ ಜನರು ಜಾನಪದ ಕಲೆಗಳ ನೃತ್ಯ,  ಕುಣಿತವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಮುಗಿಬೀಳುತ್ತಿದ್ದರು. ಇನ್ನು ಮಕ್ಕಳು, ಯುವಕರು ಜಾನಪದ ಕಲಾವಿದರೊಂದಿಗೆ ಸೆಲ್ಫಿ ಫೋಟೊಗೆ ಪೋಸು ಕೊಡುವುದು ಸಾಮಾನ್ಯವಾಗಿತ್ತು.

ಚಾಮರಾಜಪೇಟೆ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 45ಕ್ಕೂ ಹೆಚ್ಚು ಕಲಾತಂಡಗಳು ಸಾಂಸ್ಕೃತಿಕ, ಜಾನಪದ ಕಲಾಪ್ರಪಂಚವನ್ನು ಅನಾವರಣ ಮಾಡಿ ನೋಡುಗರಿಗೆ ಮುದ ನೀಡಿದವು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಾರದಾ ಆಟ್ರ್ಸ್‍ನ ಜಾನಪದ ಗೊಂಬೆ  ಆಟ, ಚೆಂಡೆ ಆಟ, ಹುಲಿ ಕುಣಿತ, ಕುದುರೆ ಕುಣಿತ, ಕರಗ ಕುಣಿತ, ನಾಗಿಣಿ ಕುಣಿತಗಳು ಮನ ತಣಿಸಿದವು.

ರಾಮಕಥೆಯ ವೇಷಧಾರಿಗಳ ಕಮಾಲ್: ಹನುಮನ ಪಾತ್ರಧಾರಿಯ ಚೇಷ್ಟೆಯನ್ನು ಚಾಮರಾಜಪೇಟೆ ಗಲ್ಲಿಗಲ್ಲಿಗಳ ಮಕ್ಕಳು ನೋಡಿ ನಕ್ಕು ನಲಿದರು. ರಾಕ್ಷಸಿ ಹಿಡಿಂಬೆ ನರ್ತನ, ವೇಷಭೂಷಣ  ಕಂಡು ಬೆರಗಾದ ಮಕ್ಕಳು, ಪಾತ್ರಧಾರಿಗಳು ಹತ್ತಿರ ಬರುತ್ತಿದ್ದಂತೆ ಕಾಲಿಗೆ ಬುದ್ಧಿ ಹೇಳುವುದು ಸಾಮಾನ್ಯವಾಗಿತ್ತು. ಲಕ್ಷ್ಮಣನಿಂದ ಹಿಡಿಂಬೆಗೆ ಅವಮಾನ, ಹನುಮಂತ ಮತ್ತು ಸುಗ್ರೀವನ ನಡುವೆ  ಗದಾಯುದ್ಧ, ರಾವಣ, ರಾಮ, ಮೇಘನಾಥ್ ಹೀಗೆ ಇಡೀ ರಾಮಾಯಣ ಕಥಾ ಪ್ರಪಂಚ ಅಬಿsನಯ ನಯನ ಮನೋಹರವಾಗಿತ್ತು.

ಉತ್ತರ ಕರ್ನಾಟಕ ಭಾಗದ ಸಾಂಸ್ಕೃತಿಕ ಕಲಾ ಮೇಳಗಳಲ್ಲಿ ಒಂದಾದ ಜಗ್ಗಲಗಿ ಶಬ್ದ ಕಿವಿ ಗುರುಗುಟ್ಟುವಂತೆ ಮಾಡಿತು. ಕರಗ ಕುಣಿತ, ವೀರಗಾಸೆ, ಜಾಂಜ್ ಮೇಳ, ವಾದ್ಯ, ಕಂಸಾಳೆ ಕುಣಿತ, ಡೊಳ್ಳು ಕುಣಿತ ಜೊತೆಗೆ ಲಲನೆಯರ ನವಿಲಿನ ನರ್ತನ ಸದಾ ಒತ್ತಡದಲ್ಲಿರುವ ನಗರದ ಜನತೆಗೆ ನಾಡಿನ ಸಂಸ್ಕೃತಿ ಕಲಾ ಹಿರಿಮೆ ಪರಿಚಯ ಮಾಡಿಸಿತು.

ಕಾಡು ಜನರ ಮೋಡಿ:
ನಾಗರಹೊಳೆ ಅಭಯಾರಣ್ಯದ ಕಾಡು ಜನರ ನೃತ್ಯ, ವೇಷಭೂಷಣ, ಕುಣಿತ, ನಾದಕ್ಕೆ ತಕ್ಕ ಹೆಜ್ಜೆ, ಕಾಡುಜನರ ಸಂಸ್ಕೃತಿ ಪರಿಚಯ ಮಾಡಿಸಿತು. ಸಾರಿಗೆ ಸಚಿವ  ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥರೆಡ್ಡಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಆರ್ಷದ್, ಬಿಬಿಎಂಪಿ ಸದಸ್ಯ ಕೋಕಿಲ್ ಚಂದ್ರಶೇಖರ್ ಅವರು ರಾಜರಾಜೇಶ್ವರಿ ಅಮ್ಮ, ಮಲೆಮಹದೇಶ್ವರ ಸ್ವಾಮಿ ಮತ್ತು ಆದಿಪರಾಶಕ್ತಿ ಅಮ್ಮನವರ ರಥಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಚಾಮರಾಜಪೇಟೆಯ 3 ಮತ್ತು 4ನೇ ಕ್ರಾಸ್‍ನಲ್ಲಿ ವಿವಿಧ  ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ನಾಡಹಬ್ಬ ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT