ಜಿಲ್ಲಾ ಸುದ್ದಿ

ಬಸ್‍ಗೆ ಬೆಂಕಿ; ತಪ್ಪಿದ ಅನಾಹುತ

Mainashree

ಜಾವಗಲ್: ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದ ಘಟನೆ ಜಾವಗಲ್ ಬಸ್‍ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.

ಅರಸೀಕೆರೆ ಡಿಪೋದ ಬಸ್ ಬೇಲೂರಿನಿಂದ ಬಾಣಾವರಕ್ಕೆ ಹೋಗಲು ಜಾವಗಲ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7 ಕ್ಕೆ ಬಂದು ನಿಂತಾಗ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಹೊತ್ತಿಕೊಂಡಿತು.

ಕೂಡಲೇ ಚಾಲಕ ಶ್ರೀರಂಗಯ್ಯ, ನಿರ್ವಾಹಕ ಕೃಷ್ಣಮೂರ್ತಿ, ಟಿಸಿ ಸಿದ್ದೆಗೌಡ ಕೂಡಲೆ ಶೌಚಾಲಯ ಮತ್ತು ಹೋಟೆಲ್‍ನಿಂದ ನೀರು ತಂದು ಬೆಂಕಿ ನಂದಿಸಿದರು. ಟಿಸಿ ಸಿದ್ದೆಗೌಡ ಬಸ್‍ಗೆ ಜೋಡಿಸಿದ್ದ ಎಲೆಕ್ಟ್ರಿಕ್ ವೈರ್ ಸಂಪರ್ಕವನ್ನು ಕಡಿತಗೊಳಿಸಿದರು.

SCROLL FOR NEXT