ಜಿಲ್ಲಾ ಸುದ್ದಿ

ವೈದ್ಯ ವಿದ್ಯಾರ್ಥಿಗಳ ಗ್ರಾಮ ಸೇವೆಗೆ ತಡೆ

Vishwanath S
ಬೆಂಗಳೂರು: ವೈದ್ಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ನೀಡಲೇಬೇಕು ಎಂದು ಸರ್ಕಾರದ ಜಾರಿಗೆ ತಂದಿದ್ದ ಕಾಯಿದೆಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ. 
'ಅರ್ಜಿಯ ಅಂತಿಮ ತೀರ್ಪಿಗೆ ವಿದ್ಯಾರ್ಥಿಗಳು ಬದ್ಧವಾಗಿರಬೇಕು. ಹಾಗೇನಾದರೂ, ವಿದ್ಯಾರ್ಥಿಗಳಿಗೆ ವ್ಯತಿರಿಕ್ತ ತೀರ್ಪು ಬಂದರೆ, ಕಾಯಿದೆಯ ನಿಯಮಗಳಿಗೆ ವಿದ್ಯಾರ್ಥಿಗಳು ಬದ್ಧರಿರಬೇಕು. ಈ ಬಗ್ಗೆ ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು'' ಎಂದು ಸೂಚಿಸಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
SCROLL FOR NEXT