ಸಂಗ್ರಹ ಚಿತ್ರ 
ಜಿಲ್ಲಾ ಸುದ್ದಿ

ಕಬ್ಬನ್‍ನಲ್ಲಿ ವಿದ್ಯಾರ್ಥಿ ಕಂಡಕ್ಟರ್ಸ್

ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್‍ಗಳು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ? ಬಸ್ ಡಿಪೊೀಗಳಲ್ಲಿ ಅಧಿಕಾರಿಗಳು...

ಬೆಂಗಳೂರು: ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್‍ಗಳು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ? ಬಸ್ ಡಿಪೊೀಗಳಲ್ಲಿ ಅಧಿಕಾರಿಗಳು ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಹೆಡ್ ಸ್ಟಾರ್ಟ್ ಎಜುಕೇಷನಲ್ ಅಕಾಡೆಮಿ ವಿದ್ಯಾರ್ಥಿಗಳಿಂದ ನಡೆದ ಪ್ಲೇ ಇನ್ ಬಿಎಂಟಿಸಿ ಬಸ್ ಎನ್ನುವ ಕಿರು ನಾಟಕ ಈ ಬಾರಿಯ ಕಬ್ಬನ್ ಉದ್ಯಾನದ ವಿಶೇಷವಾಗಿತ್ತು. 
ಪ್ರತಿ ಭಾನುವಾರ ಕಬ್ಬನ್‍ಪಾರ್ಕ್ ಒಳಗಡೆ ವಾಹನ ನಿಷೇಧಿಸಿರುವ ಹಿನ್ನೆಲೆ ಯಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಭಾಗವಾಗಿ ಇಂದು ನಾಟಕ, ನೃತ್ಯಗಳು ನಡೆದವು. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಇಂದಿನ ಪೀಳಿಗೆ ನೋಡಿರದ ಹಳೆಯ ಕಾರುಗಳ ಪ್ರದರ್ಶನ (ವಿಂಟೇಜ್ ಕಾರು) ಕೂಡ ಈ ವಾರದ ಆಕರ್ಷಣೆಯಾಗಿತ್ತು. 
ಉದಯರಾಗದಲ್ಲಿ ನರೇಂದ್ರ ಕುಮಾರ್ ಮತ್ತು ತಂಡದಿಂದ ಭಕ್ತಿಗೀತೆ ಗಾಯನ ನಡೆಯಿತು. ಯೂನಿವರ್ಸ್ ಆರ್ಟ್ಸ್ ಫೌಂಡೇಷನ್ ನಿಂದ ಗುರು ಚಂದ್ರಿಕಾ ಮಹಾಪಾತ್ರ ಅವರಿಂದ ಒಡಿಸಿ ನೃತ್ಯ, ನಾಟ್ಯ ನಿನಾದ ನೃತ್ಯಾಲಯದಿಂದ ನೃತ್ಯ ಪ್ರದರ್ಶನ ಹಾಗೂ ದಿಯಾ ಉದಯ್ ಅವರಿಂದ ಭರತನಾಟ್ಯ ಬಹಳ ವಿಶಿಷ್ಟ ರೀತಿಯಲ್ಲಿ ಮೂಡಿಬಂತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT