ಯೇನಪೋಯಾ ವಿಶ್ವವಿದ್ಯಾಲಯ 
ಜಿಲ್ಲಾ ಸುದ್ದಿ

9 ತಿಂಗಳಲ್ಲಿ 8 ಅಂತಸ್ತು ಕಟ್ಟಿದ್ರು!

ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ವಸತಿ ಸಂಕೀರ್ಣ ನಿರ್ಮಿಸಲು ನಿರಂತರ ಕಾಮಗಾರಿ ನಡೆದರೂ 2-3 ವರ್ಷ ಬೇಕು. ಆದರೆ ಇಂತಹ...

ಮಂಗಳೂರು:  ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ವಸತಿ ಸಂಕೀರ್ಣ ನಿರ್ಮಿಸಲು ನಿರಂತರ ಕಾಮಗಾರಿ ನಡೆದರೂ 2-3 ವರ್ಷ ಬೇಕು. ಆದರೆ ಇಂತಹ ಅಪಾರ್ಟ್‍ಮೆಂಟ್ ಕೇವಲ 9 ತಿಂಗಳಲ್ಲಿ ಸಿದ್ದವಾಗಿದೆ. ಇದು ಫ್ಯಾಕ್ಟರಿಯಲ್ಲಿ ತಯಾರಾದ ದೇಶದ ಮೊದಲ ವಸತಿ ಸಮುಚ್ಛಯ! ಮಂಗಳೂರಿನಿಂದ 15 ಕಿ.ಮೀ. ದೂರದ ಮಾಣಿ-ಉಳ್ಳಾಲ ರಸ್ತೆಯಲ್ಲಿ ತೊಕ್ಕೊಟ್ಟು ಸಮೀಪ ದೇರಳಕಟ್ಟೆಯಲ್ಲಿ ಈ ಬೃಹತ್ ವಸತಿ ಉದ್ಘಾಟನೆಗೆ (ಬುಧವಾರ, ಅ.21)ಸಜ್ಜಾಗಿದೆ. ಯೇನಪೋಯಾ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ನಿರ್ಮಾಣಗೊಂಡ ವಸತಿ ಸಮುಚ್ಛಯ ಇದು. ತಮಿಳುನಾಡಿನ ಕೃಷ್ಣಗಿರಿಯಲ್ಲಿ ವಿಶೇಷ ರೀತಿಯಲ್ಲಿ ಅಚ್ಚುಹಾಕಿಸಿದ ಸಿಮೆಂಟ್ ರಚನೆಯನ್ನು ಇಲ್ಲಿ ತಂದು ಜೋಡಿಸಲಾಗಿದೆ. ಒಟ್ಟು 8 ಅಂತಸ್ತಿನ ಮಹಡಿಯನ್ನು 9 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಅಂದಹಾಗೆ ಇದಕ್ಕೆ ಆಗಿರುವ ವೆಚ್ಚ ರು.14 ಕೋಟಿ.
96 ಮನೆ
ವಸತಿ ಸಮುಚ್ಛಯದಲ್ಲಿ ಪ್ರತಿ ಅಂತಸ್ತಿನಲ್ಲಿ 2 ಬೆಡ್‍ರೂಂನ 12 ಮನೆಗಳಿವೆ. ಇದರ ಗೋಡೆ,ಹಾಲೋ ಕೋರ್ ಸ್ಲ್ಯಾಬ್, ಬಾತ್‍ರೂಂ, ಕಿಟಕಿ, ಬಾಗಿಲುಗಳು ಕೂಡ ಘಟಕದಲ್ಲೇ ನಿರ್ಮಾಣವಾಗಿದೆ. ಪ್ರತಿ ಮನೆಯಲ್ಲೂ ಎರಡು ಬೆಡ್‍ರೂಂ, ಹಾಲ್, ಅಡುಗೆ ಮನೆ, ಮೂರು ಕಿಟಕಿ, ಎರಡು ಟಾಯ್ಲೆ ಟ್‍ಗಳಿವೆ.
ಆಫ್  ಸೈಟ್ ನಿರ್ಮಾಣ ತಂತ್ರಜ್ಞಾನ ಉಪಯೋಗಿಸಿ ಸಾಂಪ್ರದಾಯಿಕ ಕಟ್ಟಡ ನಿರ್ಮಾಣಕ್ಕೆ ತಗಲುವ ಸಮಯವನ್ನು ಉಳಿಸಬಹುದು.ಈ ಮಾದರಿಯ ಕಟ್ಟಡ ನಿರ್ಮಾಣದಿಂದ ಶೇ.25ರಿಂದ ಶೇ.30 ವೆಚ್ಚ ಕಡಿಮೆಯಾಗುತ್ತದೆ.
-ಫೈಜಲ್ ಇ 
ಕೆಇಎಫ್ ಇನ್ಫ್ರಾ ಸ್ಥಾಪಕ ಅಧ್ಯಕ್ಷ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

SCROLL FOR NEXT