ಜಿಲ್ಲಾ ಸುದ್ದಿ

ಮಹಿಳೆ ಅಪಹರಿಸಿದ ಆರೋಪಿಗಳು ಕೆಲವೇ ಗಂಟೆಗಳಲ್ಲಿ ಸೆರೆ

Sumana Upadhyaya

ಬೆಂಗಳೂರು: ಸುಬ್ರಮಣ್ಯಪುರ ಸಮೀಪದ ವಸಂತಪುರದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಆರು ಆರೋಪಿಗಳನ್ನು ಬಂಧಿಸಿರುವ ಸುಬ್ರಮಣ್ಯಪುರ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.

ಕೋಣನಕುಂಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಾದ ಗಣೇಶ, ಚಂದ್ರಶೇಖರ್,ರವಿಕಿರಣ್, ಅರವಿಂದ, ಉದಯ್ ಹಾಗೂ ರಮೇಶ್ ಬಂಧಿತರು.ಅಪಹರಣದ ಸೂತ್ರದಾರ 70 ವರ್ಷದ ನಾಗರಾಜ್ ಹಾಗೂ ಹರೀಶ್ ಎಂಬುವರು ತಲೆಮರೆಸಿಕೊಂಡಿ
ದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ (ಅ.25) ಸುಮಿತ್ರಾ(35) ಎಂಬುವರನ್ನು ಆರೋಪಿಗಳು ವಾಹನದಲ್ಲಿ ವಸಂತ ಪುರದ ಅವರ ಮನೆಯಿಂದ ಅಪಹರಿಸಿಕೊಂಡು ಹೋಗುತ್ತಿದ್ದರು. ಕೂಡಲೇ ಸುಮಿತ್ರಾ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಾಕಾ ಬಂಧಿ ಹಾಕಿ ಮಹಿಳೆಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ನಾಗರಾಜ್‍ರ ಪುತ್ರಿ ರಮ್ಯಾ(ಹೆಸರು ಬದಲಿಸಲಾಗಿದೆ) ಎಂಬುವರನ್ನು ಆಕೆಯ ಸ್ನೇಹಿತ ಕರೆದುಕೊಂಡು ಹೋಗಿದ್ದ. ಆದರೆ, ರಮ್ಯಾಗೆ ಪರಿಚಿತರಾಗಿದ್ದ ಸುಮಿತ್ರಾ ಅವರಿಗೆ ಈ ಬಗ್ಗೆ ಮಾಹಿತಿ ಇತ್ತು. ರಮ್ಯಾ ಈ ಹಿಂದೆಯೂ ವ್ಯಕ್ತಿಯ ಜತೆ ಹೋಗಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಸುಮಿತ್ರಾ ಹೊಂದಿದ್ದು, ಅವರ ಕುಮ್ಮಕ್ಕಿನಿಂದಲೇ ರಮ್ಯಾ ಪರಾರಿಯಾಗಿದ್ದಾರೆಂದು ಕುಪಿತಗೊಂಡ ನಾಗರಾಜ್, ಹುಡುಗರ ಮೂಲಕ ಅಪಹರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ರಮ್ಯಾ ಹಾಗೂ ಯುವಕ ಇನ್ನೂ ಪತ್ತೆಯಾಗಿಲ್ಲ.

SCROLL FOR NEXT