ಡಾ.ಎಂ.ಎಂ. ಕಲಬುರ್ಗಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಡಾ. ಕಲಬುರ್ಗಿ ಹತ್ಯೆ ಸಂಶೋಧನೆಗೇ ಗುಂಡಿಟ್ಟಂತೆ

ಯಾವುದೇ ಧರ್ಮದಲ್ಲಿ ಕಳ್ಳತನ, ಕೊಲೆ ಮಾಡು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ, ಕೆಲವೊಂದು ಕೋಮುವಾದಿ ಶಕ್ತಿಗಳು ಕಲಬುರ್ಗಿ ಅವರನ್ನು...

ಬೆಂಗಳೂರು: ಯಾವುದೇ ಧರ್ಮದಲ್ಲಿ ಕಳ್ಳತನ, ಕೊಲೆ ಮಾಡು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ, ಕೆಲವೊಂದು ಕೋಮುವಾದಿ ಶಕ್ತಿಗಳು ಕಲಬುರ್ಗಿ ಅವರನ್ನು ಕೊಲೆಗೈದಿರುವುದು ಸಂಶೋಧನೆಗೇ ಗುಂಡಿಟ್ಟಂತೆ ಎಂದು ನಾಡೋಜ ಡಾ.ಕಮಲಾ ಹಂಪನಾ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬನ್ ಪಾರ್ಕ್‍ನ ಎನ್‍ಜಿಒ ಭವನದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ಸಂಶೋಧಕರು ಯಾವ ದೃಷ್ಟಿಯಿಂದ ವಿಷಯವನ್ನು ನೋಡಿರುತ್ತಾರೆ ಎಂಬುದನ್ನು ತಿಳಿದು ಸತ್ಯವನ್ನು ಅರ್ಥೈಸಿಕೊಳ್ಳಬೇಕು. ಅರ್ಥವಾಗುವ ಮುನ್ನ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದರು.

ಸಂಶೋಧನೆಗೆ ಕೊನೆ ಇಲ್ಲ: ವೈದಿಕ ಧರ್ಮವೇ ಅಲ್ಲ, ವೀರಶೈವ ಲಿಂಗಾಯತ ಬೇರೆ, ವೀರಶೈವ ಅತ್ಯಂತ ಪ್ರಾಚೀನ ಧರ್ಮ ಎಂದು ಹೇಳಿದ್ದ ಕಲಬುರ್ಗಿ ಅವರು ಅದಕ್ಕೆ
ಪುರಾವೆಗಳನ್ನು ಒದಗಿಸಿದ್ದು. ಇಂಥಾ ಸಂಶೋಧನೆಗಳನ್ನು ಸ್ವಾಗತಿಸುವ ಮನಃಸ್ಥಿತಿ ಬೆಳೆಯಬೇಕಷ್ಟೆ. 4ನೇ ಶತಮಾನದಲ್ಲಿಯೇ ಸಾಕ್ರಟೀಸ್ ತತ್ವಗಳನ್ನು ಒಪ್ಪಿಕೊಳ್ಳದ ಕ್ರೂರ ಮನಸ್ಸುಗಳು ಅವರನ್ನು ವಿಷವಿಕ್ಕಿ ಕೊಂದಿದ್ದನ್ನು ಸ್ಮರಿಸಿದ ಅವರು, ಸಂಶೋಧನೆ ಮತ್ತು ಸಂಶೋಧಕರ ಅಭಿಪ್ರಾಯಗಳಿಗೆ ಕೊನೆ ಇಲ್ಲ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕಲಬುಗಿ ಅವರ ಹತ್ಯೆ ಬಹಳ ಸೂಕ್ಷ್ಮ ವಿಷಯವಾಗಿದ್ದು, ಬುದ್ದಿಜೀವಿಗಳಿಗೆ ಇದು ಕರೆಗಂಟೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಒಟ್ಟಾಗಿ ದನಿ ಎತ್ತಬೇಕು, ಇಲ್ಲವಾದಲ್ಲಿ ಇಂತಹ ಅಮಾನವೀಯ ಕೃತ್ಯವನ್ನು ನಾವು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು. ಈಸಂದರ್ಭದಲ್ಲಿ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT