ಜಿಲ್ಲಾ ಸುದ್ದಿ

ಯಜಮಾನರ ಸಲಹೆ ತಪ್ಪಲ್ಲ: ಉಪ ಮೇಯರ್

ಬೆಂಗಳೂರು: ರಾಜಕೀಯದಲ್ಲಿ 20 ವರ್ಷಗಳ ಅನುಭವವಿದ್ದು, ಯಜಮಾನರ ಸಲಹೆ ಪಡೆದು ಕೆಲಸ ಮಾಡುವುದು ತಪ್ಪಲ್ಲ ಎನ್ನುತ್ತಾರೆ ಉಪಮೇಯರ್ ಎಸ್.ಪಿ. ಹೇಮಲತ.

ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಿಯ ಜೊತೆ ರಾಜಕೀಯದಲ್ಲಿ ಓಡಾಡಿದ್ದರಿಂದ ಸುಮಾರು 20 ವರ್ಷಗಳ ಅನುಭವವಿದೆ. ಪತಿಯ ಸಲಹೆ ಪಡೆಯುವುದರಲ್ಲಿ ತಪ್ಪೇನಿಲ್ಲ.

ಸಲಹೆ ಪಡೆದಾಕ್ಷಣ ಮಹಿಳೆಯರು ಅಸಮರ್ಥರು ಎಂದರ್ಥವಲ್ಲ. ಮಹಿಳೆಯರು ರಾಜಕೀಯದಲ್ಲಿ ಬೆಳೆಯುವ ಸಾಮಥ್ರ್ಯ ಹೊಂದಿರುವುದರಿಂದ ಇಲ್ಲಿಯವರೆಗೆ ಬಂದಿದ್ದಾರೆ. ನಾವು ಗಂಡಸರ ಮುಷ್ಠಿಯಲ್ಲಿಲ್ಲ ಎಂದರು.

SCROLL FOR NEXT