ಮಾನವ ಕಳ್ಳಸಾಗಣೆ 
ಜಿಲ್ಲಾ ಸುದ್ದಿ

ಅಮೆರಿಕಾಗೆ ಮಾನವ ಕಳ್ಳಸಾಗಾಣೆ ಮಾಡುತ್ತಿದ್ದ ಜಾಲ ಪತ್ತೆ

ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರಿಗೆ ಇಲ್ಲಿರುವ ಮಕ್ಕಳನ್ನು ಪಾಸ್‍ಪೋರ್ಟ್ ವೀಸಾ ಇನ್ನಿತರ ದಾಖಲಾತಿಗಳ...

ಬೆಂಗಳೂರು: ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರಿಗೆ ಇಲ್ಲಿರುವ ಮಕ್ಕಳನ್ನು ಪಾಸ್‍ಪೋರ್ಟ್ ವೀಸಾ ಇನ್ನಿತರ ದಾಖಲಾತಿಗಳ ಮೂಲಕ ಕಳ್ಳಸಾಗಾಣೆ ಮಾಡುತ್ತಿದ್ದ ಜಾಲವನ್ನು ನಗರ ಪೊಲೀಸರು ಬೇಧಿಸಿದ್ದಾರೆ.

ಅಕ್ರಮ ಕಳ್ಳಸಾಗಾಣೆ ಜಾಲದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಸೇರಿ 16 ಮಂದಿಯನ್ನು ಬಂಧಿಸಲಾಗಿದ್ದು ಇಲ್ಲಿಯವರೆಗೆ ಗುಜರಾತ್ ಪಂಜಾಬ್‍ನಿಂದ 25 ರಿಂದ 30 ಮಂದಿ ಮಕ್ಕಳನ್ನು ಕಳುಹಿಸಿರುವ ಮಾಹಿತಿಯಿದ್ದು ಅವರೆಲ್ಲರೂ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.

ಜಯಮಹಲ್‍ನ ಉದಯ್ ಪ್ರತಾಪ್‍ಸಿಂಗ್(37) ಹೊರಮಾವುವಿನ ಪವಿನ್(43) ಮಿಚೆಲ್(37) ಸಹಕಾರನಗರದ ರಾಜೇಶ್(43) ಆರ್ ಟಿ ನಗರದ ಸಿಮನ್(36) ಕುಶಾಲಪ್ಪ(34) ಬಾಣಸವಾಡಿಯ ಗುಣಶೇಖರ್(42) ಕೊತ್ತನೂರಿನ ಅರುಳ್‍ಕುಮಾರ್(46) ಬೊಮ್ಮನಹಳ್ಳಿಯ ಜಾಯಿಸನ್(37) ಮಹಾಲಕ್ಷ್ಮೀಪುರಂನ ಮಂಜುನಾಥ(37) ಕಮ್ಮನಹಳ್ಳಿಯ ಫ್ರಾನ್ಸಿಸ್(34) ಹೆಚ್‍ಎಎಲ್‍ನ ಲತಾವೇಮರೆಡ್ಡಿ(34) ಸಂಗೀತ ಪ್ರಕಾಶ್, ಸುಧೀರ್ ಕುಮಾರ್, ಭಾನುಪ್ರಕಾಶ್, ವೀಣಾ ಪ್ರಕಾಶ್, ಸಂಗೀತ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ.

ಮೊದಲಿಗೆ ಅಕ್ರಮವಾಸಿಗಳ ಮಕ್ಕಳನ್ನು ನಗರಕ್ಕೆ ಕರೆತಂದು ಅವರಿಗೆ ಒಂದೂವರೆ ತಿಂಗಳ ತರಬೇತಿ ನೀಡಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಅವುಗಳನ್ನು ನೀಡಿ ಪಾಸ್‍ಪೋರ್ಟ್ ವೀಸಾ ಪಡೆದು ನಕಲಿ ತಂದೆ ತಾಯಿಗಳೊಂದಿಗೆ ಅಮೆರಿಕಾಕ್ಕೆ ಕಳುಹಿಸಿ ಅಲ್ಲಿನ ನಿಜವಾದ ಅಕ್ರಮವಾಸಿ ತಂದೆ ತಾಯಿಗಳಿಗೆ ಒಪ್ಪಿಸಿ ವಾಪಸಾಗುತ್ತಿದ್ದರು.

ಇಂತಹ ಜಾಲ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಾಹಿತಿ ಬಂದ ತಕ್ಷಣ 14 ವಿಶೇಷ ತಂಡಗಳನ್ನು ರಚಿಸಿ ಪಾಸ್‍ಪೋರ್ಟ್ ವೀಸಾ ಕಚೇರಿಗಳು ಬಿಬಿಎಂಪಿ ಇನ್ನಿತರ ಇಲಾಖೆಗಳಿಂದ ಮಾಹಿತಿ ಪಡೆದುಕೊಂಡು ಸತತ 1 ವರ್ಷ ಕಾರ್ಯಾಚರಣೆ ನಡೆಸಿದ ನಂತರ ಜಾಲಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ