ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 
ಜಿಲ್ಲಾ ಸುದ್ದಿ

ನಕಲಿ ವೀಸಾ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 9 ಮಂದಿ ಬಂಧನ

ನಕಲಿ ವೀಸಾ ಮತ್ತು ದಾಖಲೆಗಳನ್ನು ಹೊಂದಿದ್ದ 9 ಮಂದಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ನಕಲಿ ವೀಸಾ ಮತ್ತು ದಾಖಲೆಗಳನ್ನು ಹೊಂದಿದ್ದ 9 ಮಂದಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ 9 ಮಂದಿಯನ್ನು ಉದ್ಯೋಗ ಅರಸಿ ಬಹರೇನ್‌ಗೆ ಹೊರಟಿದ್ದವರ ಪಾಸ್ ಪೋರ್ಟ್ ನಿಲ್ದಾಣದಲ್ಲಿ ಅಧಿಕಾರಿಗಳು ಪರಿಶೀಲಿಸಿದ್ದು ಈ ವೇಳೆ ಎಲ್ಲರ ವೀಸಾ ಮತ್ತು ಇತರ ದಾಖಲೆಗಳು ನಕಲಿ ಎಂಬುದು ತಿಳಿದಿದ್ದು ಅವರನ್ನು ಬಂಧಿಸಲಾಗಿದೆ.

ಬಂಧಿತರು ಇಷಾಕ್ ಮೊಹಮ್ಮದ್ ಆಶಿಕ್ (21), ಸಾಧಿಕ್ ಪಾಷಾ (25), ಎಜಾಜ್ ದಸ್ತಗೀರ್ (24), ಇರ್ಫಾನ್ (24) ಮೊಹಮದ್ ಶೋಯಬ್ (22), ಸಲೀಂ ಪಾಷಾ (21), ಇಷಾಬುದ್ದೀನ್ (38), ಸನಾವುಲ್ಲ (22) ಹಾಗೂ ಅಜಂನನ್ನು (28) ಎಂದು ತಿಳಿದುಬಂದಿದೆ.

ಅನುಮಾನಗೊಂಡ ಸಿಬ್ಬಂದಿ ಕೂಡಲೇ ಠಾಣೆಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ತೆರಳಿ ಎಲ್ಲರನ್ನು ಬಂಧಿಸಲಾಯಿತು. ಪಿಯುಸಿ ಮತ್ತು ಡಿಪ್ಲೊಮಾ ಮುಗಿಸಿರುವ ಇವರಿಗೆ, ಭದ್ರಾವತಿಯ ಟ್ರಾವೆಲ್‌ ಏಜೆಂಟ್ ಬಷೀರ್ ಎಂಬಾತ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ. ಅದಕ್ಕಾಗಿ ಎಲ್ಲರಿಂದ ತಲಾ ರು. 1.2 ಲಕ್ಷ ಪಡೆದು, ನಕಲಿ ವೀಸಾ, ದಾಖಲೆಗಳನ್ನು ಸೃಷ್ಟಿಸಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಜಿತ್ ಪವಾರ್ ದುರ್ಮರಣದಲ್ಲಿ 'ಪಿತೂರಿ' ನಡೆದಿದೆಯೇ? ಶರದ್ ಪವಾರ್ ಮೊದಲ ಪ್ರತಿಕ್ರಿಯೆ...

4ನೇ ಟಿ20: ದುಬೆ ಅರ್ಧಶತಕ ವ್ಯರ್ಥ; ನ್ಯೂಜಿಲ್ಯಾಂಡ್ ವಿರುದ್ಧ 50 ರನ್‌ನಿಂದ ಸೋತ ಭಾರತ!

ಸರ್... ಹಾವಾಡಿಗರಿಗೆ ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಇಲ್ಲ: ನಟ ಕಿಶೋರ್

ಚಿಕ್ಕಮಗಳೂರು: ಹೋಂ ಸ್ಟೇನಲ್ಲಿ ವಿಧವೆ ಜೊತೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಟಿ ರವಿ ಆಪ್ತನ ಮೇಲೆ ಹಲ್ಲೆ, Video Viral

'ಮಹಾ' ಡಿಸಿಎಂ ಅಜಿತ್ ಪವಾರ್ ದುರಂತ ಸಾವು ಬೆನ್ನಲ್ಲೇ ಬಾರಾಮತಿಯಲ್ಲಿ ತುರ್ತು ATC ತಂಡ ನಿಯೋಜಿಸಿದ IAF

SCROLL FOR NEXT