ಬೆಂಕಿಗೆ ಆಹುತಿಯಾದ ಮನೆಯ ಒಳಭಾಗ 
ಜಿಲ್ಲಾ ಸುದ್ದಿ

ದುಷ್ಕರ್ಮಿಗಳಿಂದ ಮನೆಗೆ ಬೆಂಕಿ: ತಾಯಿ, ಮಗ ಸಜೀವ ದಹನ

ತಡರಾತ್ರಿ ಮನೆಮಂದಿ ಮಲಗಿದ್ದಾಗ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಇಟ್ಟ ಪರಿಣಾಮ ತಾಯಿ ಮಗ ಸಜೀವ ದಹನವಾಗಿರುವ ಘಟನೆ...

ಮಾಗಡಿ(ರಾಮನಗರ): ತಡರಾತ್ರಿ ಮನೆಮಂದಿ ಮಲಗಿದ್ದಾಗ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಇಟ್ಟ ಪರಿಣಾಮ ತಾಯಿ ಮಗ ಸಜೀವ ದಹನವಾಗಿರುವ ಘಟನೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ನಡೆದಿದೆ.

ಮಂಚನಬೆಲೆ ಗ್ರಾಮದ ವಾಸಿ ಭೋಜೇಗೌಡರ ಪತ್ನಿ ವಿಜಯಲಕ್ಷ್ಮಿ(45) ಮತ್ತು ಪುತ್ರ ಭರತ್(20) ಮೃತಪಟ್ಟ ದುರ್ದೈವಿಗಳು. ಇನ್ನು ಸುಟ್ಟ ಗಾಯಗಳಿಂದ ತೀವ್ರ ಅಸ್ವಸ್ಥಗೊಂಡಿರುವ ಭೋಜೇಗೌಡ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ರಾತ್ರಿ ವಿಜಯಲಕ್ಷ್ಮಿ ಮತ್ತು ಅವರ ಪುತ್ರ ಭರತ್ ಮನೆಯ ಹಾಲ್ ನಲ್ಲಿಯೇ ಮಲಗಿದ್ದರು. ದುಷ್ಕರ್ಮಿಗಳು ತಡರಾತ್ರಿ ಮನೆಯ ಎರಡು ಬಾಗಿಲುಗಳು ತೆರೆಯಲು ಸಾಧ್ಯವಾಗದಂತೆ ಹೊರಗಿನಿಂದ ಚಿಲಕಗಳನ್ನು ದಾರದಿಂದ ಬಿಗಿದ್ದಾರೆ. ಆನಂತರ ಕಿಟಿಕಿಯಿಂದ ಮನೆಯೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹಾಲ್ ನಲ್ಲಿ ದಿವಾನ್ ಮೇಲೆ ಮಲಗಿದ್ದ ಭರತ್ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಆಗ ಹಾಲ್ ನಲ್ಲಿಯೇ ನೆಲದ ಮೇಲೆ ಮಲಗಿದ್ದ ವಿಜಯಲಕ್ಷ್ಮಿ ಹಾಗೂ ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಬೋಜೇಗೌಡರು ಮಗನನ್ನು ರಕ್ಷಿಸಲು ಬಂದಿದ್ದು ಆದರೆ ಪ್ರಯೋಜನವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

ಡಿಕೆಶಿ, ತೇಜಸ್ವಿ ಸೂರ್ಯ ಜಟಾಪಟಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಬಗ್ಗೆ ಕೇಂದ್ರ ಸಚಿವ ಖಟ್ಟರ್ ಹೇಳಿದ್ದೇನು?

ಟನಲ್ ರಸ್ತೆ ಬೇಡ ಎನ್ನಲು ಈ ತೇಜಸ್ವಿ ಸೂರ್ಯ ಯಾರು?, ಗೌರವ ಕೊಟ್ಟು ಕರೆದು ಮಾತಾಡಿದರೆ ಬಾಯಿಗೆ ಬಂದಂತೆ ವದರುತ್ತಿದ್ದಾನೆ: DK Shivakumar; Video

ಬೆಂಗಳೂರು: ಕಸ ಎಸೆದವರ ಮನೆ ಮುಂದೆಯೇ ತ್ಯಾಜ್ಯ ಸುರಿದು, ದಂಡ ಹಾಕಿದ GBA; Video

'ಹೇಡಿ' ಮೋದಿಗಿಂತ ಇಂದಿರಾ ಗಾಂಧಿಗೆ ಹೆಚ್ಚಿನ ಧೈರ್ಯವಿತ್ತು: ರಾಹುಲ್ ಗಾಂಧಿ ವಾಗ್ದಾಳಿ

SCROLL FOR NEXT