ವಿಧಾನಪರಿಷತ್ತು ಕಲಾಪದ ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಮೇಲ್ಮನೆಗೆ ಆಯ್ಕೆ: ಒಕ್ಕಲಿಗ-ಲಿಂಗಾಯಿತರೆ ಪ್ರಬಲರು

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ಪೈಕಿಒಕ್ಕಲಿಗ(7), ಲಿಂಗಾಯಿತ (6) ಜನಾಂಗ...

ಬೆಂಗಳೂರು: ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾ ವಣೆಯಲ್ಲಿ ಆಯ್ಕೆಯಾದವರ ಪೈಕಿ ಒಕ್ಕಲಿಗ (7), ಲಿಂಗಾಯಿತ (6) ಜನಾಂಗದವರು  ಸಮಬಲ ಸಾಧಿಸಿದ್ದು, ಉಳಿದಂತೆ ಕುರುಬ-2, ಮರಾಠ- 2 ಜತೆಗೆ  ಬಂಟ, ಕೊಡವ, ಬಿಲ್ಲವ,  ದೇವಾಂಗ, ಬಲಿಜ, ವಿಶ್ವಕರ್ಮ, ಪರಿಶಿಷ್ಟ ಜಾತಿ ಹಾಗೂ ರಜಪೂತ ಸಮುದಾಯದಿಂದ ತಲಾ ಒಬ್ಬೊಬ್ಬರು ಅಭ್ಯರ್ಥಿಗಳು  ಆಯ್ಕೆಯಾಗಿದ್ದಾರೆ.

ಇವರಲ್ಲಿ ಕಾಂಗ್ರೆಸ್‍ನಿಂದ ಲಿಂಗಾಯಿತ- ಎಸ್.ಆರ್. ಪಾಟೀಲ್ (ಬಾಗಲ ಕೋಟೆ),  ಸವರಾಜ ಪಾಟೀಲ್ ಇಟಗಿ (ರಾಯಚೂರು), ಒಕ್ಕಲಿಗ- ಎಂ.ಎ. ಗೋಪಾಲಸ್ವಾಮಿ  ಹಾಸನ), ಎಂ.ನಾರಾಯಣಸ್ವಾಮಿ (ಬೆಂಗಳೂರು ನಗರ ), ಎಸ್.ರವಿ (¨ಬೆಂಗಳೂರು   ಗ್ರಾಮಾಂತರ), ಮರಾಠ-ಘೋಟ್ನೇಕರ್ ಶ್ರೀಕಾಂತ್ (ಉತ್ತರ ಕನ್ನಡ), ಶ್ರೀನಿವಾಸ ಮಾನೆ (ಧಾರವಾಡ), ಕುರುಬ- ಆರ್.ಪ್ರಸನ್ನ ಕುಮಾರ್ (ಶಿವಮೊಗ್ಗ), ರಜಪೂತ- ವಿಜಯ್ ಸಿಂಗ್  ಬೀದರ್),  ವಿಶ್ವಕರ್ಮ- ಆರ್.ರಘು ಆಚಾರ್ (ಚಿತ್ರದುರ್ಗ), ಪರಿಶಿಷ್ಟ ಜಾತಿ- ಆರ್. ಧರ್ಮಸೇನ (ಮೈಸೂರು), ಬಂಟ- ಪ್ರತಾಪ್‍ಚಂದ್ರ ಶೆಟ್ಟಿ (ದಕ್ಷಿಣ ಕನ್ನಡ), ದೇವಾಂಗ- ಕೆ.ಸಿ.   ಕೊಂಡಯ್ಯ ಬಳ್ಳಾರಿ) ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಲಿಂಗಾಯಿತ- ಬಿ.ಜಿ. ಪಾಟೀಲ್ (ಕಲಬುರ್ಗಿ), ಕವಟಗಿಮಠ ಮಹಾಂತೇಶ   ಮಲ್ಲಿಕಾರ್ಜುನ (ಬೆಳಗಾವಿ), ಪ್ರದೀಪ್ ಶೆಟ್ಟರ್ (ಧಾರವಾಡ),  ಬಿಲ್ಲವ- ಕೋಟಾ ಶ್ರೀನಿವಾಸ  ಜಾರಿ (ದಕ್ಷಿಣ ಕನ್ನಡ), ಒಕ್ಕಲಿಗ- ಎಂ.ಕೆ. ಪ್ರಾಣೇಶ್ (ಚಿಕ್ಕಮಗಳೂರು), ಕೊಡವ-ಸುನೀಲ್  ಸುಬ್ರಮಣಿ (ಕೊಡಗು)  ಹಾಗೂ ಜೆಡಿಎಸ್‍ನಿಂದ ಒಕ್ಕಲಿಗ- ಅಪ್ಪಾಜಿಗೌಡ (ಮಂಡ್ಯ), ಸಂದೇಶ್ ನಾಗರಾಜ್ (ಮೈಸೂರು), ಕಾಂತರಾಜ್ (ತುಮಕೂರು), ಬಲಿಜ- ಸಿ.ಆರ್.  ಮನೋಹರ್  ಕೋಲಾರ), ಪಕ್ಷೇತರರಾಗಿ ಗೆದ್ದವರಲ್ಲಿ ಕುರುಬ- ವಿವೇಕರಾವ್ ವಸಂತರಾವ್ ಪಾಟೀಲ್  ಬೆಳಗಾವಿ), ಲಿಂಗಾಯಿತ- ಬಸವನಗೌಡ ಪಾಟೀಲ್ ಯತ್ನಾಳ್ (ಬಾಗಲಕೋಟೆ) ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದ್ದಾರೆ.

ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಕಾಂಗ್ರೆಸ್ ಪಕ್ಷ 20 ಅಭ್ಯರ್ಥಿಗಳ ಪೈಕಿ ಒಕ್ಕಲಿಗ-5,  ಲಿಂಗಾಯಿತ-5, ಕುರುಬ-2, ಮರಾಠ- 2, ವಿಶ್ವಕರ್ಮ- 1, ಬಂಟ- 1, ರಜಪೂತ- 1, ಪರಿಶಿಷ್ಟ  ಜಾತಿ-1, ಪರಿಶಿಷ್ಟ ಪಂಗಡ- 1, ಜೈನ- , ನೇಕಾರ- 1 ಇದ್ದರೆ, ಬಿಜೆಪಿಯ 20  ಅಭ್ಯರ್ಥಿಗಳ  ಪೈಕಿ ಒಕ್ಕಲಿಗ-5, ಲಿಂಗಾಯಿತ-9, ಕುರುಬ-2, ಮಡಿವಾಳ- 1, ಕೊಡವ- 1, ಬಿಲ್ಲವ- 1, ಮರಾಠ-1 ಇದ್ದರೆ, ಜೆಡಿಎಸ್ ಕಣಕ್ಕಿಳಿಸಿದ್ದ 17 ಅಭ್ಯರ್ಥಿಗಳ ಪೈಕಿ ಲಿಂಗಾ ಯಿತ-4,  ಒಕ್ಕಲಿಗ- 6, ಕುರುಬ-1, ಕೊಡವ-1, ಬಲಿಜ-1, ಜೈನ-1,  ರೆಡ್ಡಿ-1, ಕೊಂಕಣಿ-1  ಜನಾಂಗದವರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ತಮಿಳುನಾಡು ಸಿಎಂ ವಿಜಯ್-ಪ್ರಧಾನಿ ಮೋದಿ ಭೇಟಿ: ಎರಡು ದೊಡ್ಡ ಬೇಡಿಕೆ; ಇಲ್ಲಿದೆ ವಿವರ..

'ಬಹುಶಃ ರಾಹುಲ್ ಗಾಂಧಿಗೆ ಈಗ ತೃಪ್ತಿಯಾಗಿರಬಹುದು': ED ದಾಳಿ ಕುರಿತು ಮಾಜಿ ಸಿಎಂ ಪಿಣರಾಯಿ ವಿಜಯನ್ ಕಿಡಿ

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

SCROLL FOR NEXT