ವಿಧಾನಪರಿಷತ್ತು ಕಲಾಪದ ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಮೇಲ್ಮನೆಗೆ ಆಯ್ಕೆ: ಒಕ್ಕಲಿಗ-ಲಿಂಗಾಯಿತರೆ ಪ್ರಬಲರು

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ಪೈಕಿಒಕ್ಕಲಿಗ(7), ಲಿಂಗಾಯಿತ (6) ಜನಾಂಗ...

ಬೆಂಗಳೂರು: ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾ ವಣೆಯಲ್ಲಿ ಆಯ್ಕೆಯಾದವರ ಪೈಕಿ ಒಕ್ಕಲಿಗ (7), ಲಿಂಗಾಯಿತ (6) ಜನಾಂಗದವರು  ಸಮಬಲ ಸಾಧಿಸಿದ್ದು, ಉಳಿದಂತೆ ಕುರುಬ-2, ಮರಾಠ- 2 ಜತೆಗೆ  ಬಂಟ, ಕೊಡವ, ಬಿಲ್ಲವ,  ದೇವಾಂಗ, ಬಲಿಜ, ವಿಶ್ವಕರ್ಮ, ಪರಿಶಿಷ್ಟ ಜಾತಿ ಹಾಗೂ ರಜಪೂತ ಸಮುದಾಯದಿಂದ ತಲಾ ಒಬ್ಬೊಬ್ಬರು ಅಭ್ಯರ್ಥಿಗಳು  ಆಯ್ಕೆಯಾಗಿದ್ದಾರೆ.

ಇವರಲ್ಲಿ ಕಾಂಗ್ರೆಸ್‍ನಿಂದ ಲಿಂಗಾಯಿತ- ಎಸ್.ಆರ್. ಪಾಟೀಲ್ (ಬಾಗಲ ಕೋಟೆ),  ಸವರಾಜ ಪಾಟೀಲ್ ಇಟಗಿ (ರಾಯಚೂರು), ಒಕ್ಕಲಿಗ- ಎಂ.ಎ. ಗೋಪಾಲಸ್ವಾಮಿ  ಹಾಸನ), ಎಂ.ನಾರಾಯಣಸ್ವಾಮಿ (ಬೆಂಗಳೂರು ನಗರ ), ಎಸ್.ರವಿ (¨ಬೆಂಗಳೂರು   ಗ್ರಾಮಾಂತರ), ಮರಾಠ-ಘೋಟ್ನೇಕರ್ ಶ್ರೀಕಾಂತ್ (ಉತ್ತರ ಕನ್ನಡ), ಶ್ರೀನಿವಾಸ ಮಾನೆ (ಧಾರವಾಡ), ಕುರುಬ- ಆರ್.ಪ್ರಸನ್ನ ಕುಮಾರ್ (ಶಿವಮೊಗ್ಗ), ರಜಪೂತ- ವಿಜಯ್ ಸಿಂಗ್  ಬೀದರ್),  ವಿಶ್ವಕರ್ಮ- ಆರ್.ರಘು ಆಚಾರ್ (ಚಿತ್ರದುರ್ಗ), ಪರಿಶಿಷ್ಟ ಜಾತಿ- ಆರ್. ಧರ್ಮಸೇನ (ಮೈಸೂರು), ಬಂಟ- ಪ್ರತಾಪ್‍ಚಂದ್ರ ಶೆಟ್ಟಿ (ದಕ್ಷಿಣ ಕನ್ನಡ), ದೇವಾಂಗ- ಕೆ.ಸಿ.   ಕೊಂಡಯ್ಯ ಬಳ್ಳಾರಿ) ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಲಿಂಗಾಯಿತ- ಬಿ.ಜಿ. ಪಾಟೀಲ್ (ಕಲಬುರ್ಗಿ), ಕವಟಗಿಮಠ ಮಹಾಂತೇಶ   ಮಲ್ಲಿಕಾರ್ಜುನ (ಬೆಳಗಾವಿ), ಪ್ರದೀಪ್ ಶೆಟ್ಟರ್ (ಧಾರವಾಡ),  ಬಿಲ್ಲವ- ಕೋಟಾ ಶ್ರೀನಿವಾಸ  ಜಾರಿ (ದಕ್ಷಿಣ ಕನ್ನಡ), ಒಕ್ಕಲಿಗ- ಎಂ.ಕೆ. ಪ್ರಾಣೇಶ್ (ಚಿಕ್ಕಮಗಳೂರು), ಕೊಡವ-ಸುನೀಲ್  ಸುಬ್ರಮಣಿ (ಕೊಡಗು)  ಹಾಗೂ ಜೆಡಿಎಸ್‍ನಿಂದ ಒಕ್ಕಲಿಗ- ಅಪ್ಪಾಜಿಗೌಡ (ಮಂಡ್ಯ), ಸಂದೇಶ್ ನಾಗರಾಜ್ (ಮೈಸೂರು), ಕಾಂತರಾಜ್ (ತುಮಕೂರು), ಬಲಿಜ- ಸಿ.ಆರ್.  ಮನೋಹರ್  ಕೋಲಾರ), ಪಕ್ಷೇತರರಾಗಿ ಗೆದ್ದವರಲ್ಲಿ ಕುರುಬ- ವಿವೇಕರಾವ್ ವಸಂತರಾವ್ ಪಾಟೀಲ್  ಬೆಳಗಾವಿ), ಲಿಂಗಾಯಿತ- ಬಸವನಗೌಡ ಪಾಟೀಲ್ ಯತ್ನಾಳ್ (ಬಾಗಲಕೋಟೆ) ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದ್ದಾರೆ.

ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಕಾಂಗ್ರೆಸ್ ಪಕ್ಷ 20 ಅಭ್ಯರ್ಥಿಗಳ ಪೈಕಿ ಒಕ್ಕಲಿಗ-5,  ಲಿಂಗಾಯಿತ-5, ಕುರುಬ-2, ಮರಾಠ- 2, ವಿಶ್ವಕರ್ಮ- 1, ಬಂಟ- 1, ರಜಪೂತ- 1, ಪರಿಶಿಷ್ಟ  ಜಾತಿ-1, ಪರಿಶಿಷ್ಟ ಪಂಗಡ- 1, ಜೈನ- , ನೇಕಾರ- 1 ಇದ್ದರೆ, ಬಿಜೆಪಿಯ 20  ಅಭ್ಯರ್ಥಿಗಳ  ಪೈಕಿ ಒಕ್ಕಲಿಗ-5, ಲಿಂಗಾಯಿತ-9, ಕುರುಬ-2, ಮಡಿವಾಳ- 1, ಕೊಡವ- 1, ಬಿಲ್ಲವ- 1, ಮರಾಠ-1 ಇದ್ದರೆ, ಜೆಡಿಎಸ್ ಕಣಕ್ಕಿಳಿಸಿದ್ದ 17 ಅಭ್ಯರ್ಥಿಗಳ ಪೈಕಿ ಲಿಂಗಾ ಯಿತ-4,  ಒಕ್ಕಲಿಗ- 6, ಕುರುಬ-1, ಕೊಡವ-1, ಬಲಿಜ-1, ಜೈನ-1,  ರೆಡ್ಡಿ-1, ಕೊಂಕಣಿ-1  ಜನಾಂಗದವರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

ಟಿ20 ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 101 ರನ್‌ಗಳ ದಾಖಲೆಯ ಜಯ; ಕಟಕ್‌ನಲ್ಲಿ ಹರಿಣರಿಗೆ ಮೊದಲ ಸೋಲು!

Indigo ವಿರುದ್ಧ ದಿಟ್ಟ ಕ್ರಮ: ವಿಮಾನ ಕಾರ್ಯಾಚರಣೆಯಲ್ಲಿ ಶೇ.10ರಷ್ಟು ಕಡಿತಕ್ಕೆ ಕೇಂದ್ರ ಸರ್ಕಾರ ಆದೇಶ!

Microsoft ಮೆಗಾ ಹೂಡಿಕೆ: 'AI 1st ಫ್ಯೂಚರ್'ಗಾಗಿ 1.5 ಲಕ್ಷ ಕೋಟಿ ರೂ ಬಂಡವಾಳ; ಬೆಂಗಳೂರಿನಲ್ಲಿ AI ಘಟಕ!

1st T20I: ಹಾರ್ದಿಕ್ ಪಾಂಡ್ಯಾ ಏಕಾಂಗಿ ಹೋರಾಟ; ದಕ್ಷಿಣ ಆಫ್ರಿಕಾ ಗೆ 176 ರನ್ ಗುರಿ!

SCROLL FOR NEXT