ವಿಧಾನಪರಿಷತ್ತು ಕಲಾಪದ ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಮೇಲ್ಮನೆಗೆ ಆಯ್ಕೆ: ಒಕ್ಕಲಿಗ-ಲಿಂಗಾಯಿತರೆ ಪ್ರಬಲರು

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ಪೈಕಿಒಕ್ಕಲಿಗ(7), ಲಿಂಗಾಯಿತ (6) ಜನಾಂಗ...

ಬೆಂಗಳೂರು: ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾ ವಣೆಯಲ್ಲಿ ಆಯ್ಕೆಯಾದವರ ಪೈಕಿ ಒಕ್ಕಲಿಗ (7), ಲಿಂಗಾಯಿತ (6) ಜನಾಂಗದವರು  ಸಮಬಲ ಸಾಧಿಸಿದ್ದು, ಉಳಿದಂತೆ ಕುರುಬ-2, ಮರಾಠ- 2 ಜತೆಗೆ  ಬಂಟ, ಕೊಡವ, ಬಿಲ್ಲವ,  ದೇವಾಂಗ, ಬಲಿಜ, ವಿಶ್ವಕರ್ಮ, ಪರಿಶಿಷ್ಟ ಜಾತಿ ಹಾಗೂ ರಜಪೂತ ಸಮುದಾಯದಿಂದ ತಲಾ ಒಬ್ಬೊಬ್ಬರು ಅಭ್ಯರ್ಥಿಗಳು  ಆಯ್ಕೆಯಾಗಿದ್ದಾರೆ.

ಇವರಲ್ಲಿ ಕಾಂಗ್ರೆಸ್‍ನಿಂದ ಲಿಂಗಾಯಿತ- ಎಸ್.ಆರ್. ಪಾಟೀಲ್ (ಬಾಗಲ ಕೋಟೆ),  ಸವರಾಜ ಪಾಟೀಲ್ ಇಟಗಿ (ರಾಯಚೂರು), ಒಕ್ಕಲಿಗ- ಎಂ.ಎ. ಗೋಪಾಲಸ್ವಾಮಿ  ಹಾಸನ), ಎಂ.ನಾರಾಯಣಸ್ವಾಮಿ (ಬೆಂಗಳೂರು ನಗರ ), ಎಸ್.ರವಿ (¨ಬೆಂಗಳೂರು   ಗ್ರಾಮಾಂತರ), ಮರಾಠ-ಘೋಟ್ನೇಕರ್ ಶ್ರೀಕಾಂತ್ (ಉತ್ತರ ಕನ್ನಡ), ಶ್ರೀನಿವಾಸ ಮಾನೆ (ಧಾರವಾಡ), ಕುರುಬ- ಆರ್.ಪ್ರಸನ್ನ ಕುಮಾರ್ (ಶಿವಮೊಗ್ಗ), ರಜಪೂತ- ವಿಜಯ್ ಸಿಂಗ್  ಬೀದರ್),  ವಿಶ್ವಕರ್ಮ- ಆರ್.ರಘು ಆಚಾರ್ (ಚಿತ್ರದುರ್ಗ), ಪರಿಶಿಷ್ಟ ಜಾತಿ- ಆರ್. ಧರ್ಮಸೇನ (ಮೈಸೂರು), ಬಂಟ- ಪ್ರತಾಪ್‍ಚಂದ್ರ ಶೆಟ್ಟಿ (ದಕ್ಷಿಣ ಕನ್ನಡ), ದೇವಾಂಗ- ಕೆ.ಸಿ.   ಕೊಂಡಯ್ಯ ಬಳ್ಳಾರಿ) ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಲಿಂಗಾಯಿತ- ಬಿ.ಜಿ. ಪಾಟೀಲ್ (ಕಲಬುರ್ಗಿ), ಕವಟಗಿಮಠ ಮಹಾಂತೇಶ   ಮಲ್ಲಿಕಾರ್ಜುನ (ಬೆಳಗಾವಿ), ಪ್ರದೀಪ್ ಶೆಟ್ಟರ್ (ಧಾರವಾಡ),  ಬಿಲ್ಲವ- ಕೋಟಾ ಶ್ರೀನಿವಾಸ  ಜಾರಿ (ದಕ್ಷಿಣ ಕನ್ನಡ), ಒಕ್ಕಲಿಗ- ಎಂ.ಕೆ. ಪ್ರಾಣೇಶ್ (ಚಿಕ್ಕಮಗಳೂರು), ಕೊಡವ-ಸುನೀಲ್  ಸುಬ್ರಮಣಿ (ಕೊಡಗು)  ಹಾಗೂ ಜೆಡಿಎಸ್‍ನಿಂದ ಒಕ್ಕಲಿಗ- ಅಪ್ಪಾಜಿಗೌಡ (ಮಂಡ್ಯ), ಸಂದೇಶ್ ನಾಗರಾಜ್ (ಮೈಸೂರು), ಕಾಂತರಾಜ್ (ತುಮಕೂರು), ಬಲಿಜ- ಸಿ.ಆರ್.  ಮನೋಹರ್  ಕೋಲಾರ), ಪಕ್ಷೇತರರಾಗಿ ಗೆದ್ದವರಲ್ಲಿ ಕುರುಬ- ವಿವೇಕರಾವ್ ವಸಂತರಾವ್ ಪಾಟೀಲ್  ಬೆಳಗಾವಿ), ಲಿಂಗಾಯಿತ- ಬಸವನಗೌಡ ಪಾಟೀಲ್ ಯತ್ನಾಳ್ (ಬಾಗಲಕೋಟೆ) ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದ್ದಾರೆ.

ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಕಾಂಗ್ರೆಸ್ ಪಕ್ಷ 20 ಅಭ್ಯರ್ಥಿಗಳ ಪೈಕಿ ಒಕ್ಕಲಿಗ-5,  ಲಿಂಗಾಯಿತ-5, ಕುರುಬ-2, ಮರಾಠ- 2, ವಿಶ್ವಕರ್ಮ- 1, ಬಂಟ- 1, ರಜಪೂತ- 1, ಪರಿಶಿಷ್ಟ  ಜಾತಿ-1, ಪರಿಶಿಷ್ಟ ಪಂಗಡ- 1, ಜೈನ- , ನೇಕಾರ- 1 ಇದ್ದರೆ, ಬಿಜೆಪಿಯ 20  ಅಭ್ಯರ್ಥಿಗಳ  ಪೈಕಿ ಒಕ್ಕಲಿಗ-5, ಲಿಂಗಾಯಿತ-9, ಕುರುಬ-2, ಮಡಿವಾಳ- 1, ಕೊಡವ- 1, ಬಿಲ್ಲವ- 1, ಮರಾಠ-1 ಇದ್ದರೆ, ಜೆಡಿಎಸ್ ಕಣಕ್ಕಿಳಿಸಿದ್ದ 17 ಅಭ್ಯರ್ಥಿಗಳ ಪೈಕಿ ಲಿಂಗಾ ಯಿತ-4,  ಒಕ್ಕಲಿಗ- 6, ಕುರುಬ-1, ಕೊಡವ-1, ಬಲಿಜ-1, ಜೈನ-1,  ರೆಡ್ಡಿ-1, ಕೊಂಕಣಿ-1  ಜನಾಂಗದವರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT