ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆದ ಚಿತ್ರಸಂತೆ 
ಜಿಲ್ಲಾ ಸುದ್ದಿ

95 ಸಾವಿರ ರು. ನೀಡಿ ಕಲಾಕೃತಿ ಖರೀದಿಸಿದ ಪರಮೇಶ್ವರ್

ಕಲಾವಿದನೊಬ್ಬನ ಕಲಾಕೃತಿಗೆ ಮನಸೋತ ಗೃಹ ಸಚಿವ ಜಿ. ಪರಮೇಶ್ವರ ಅವರು 95 ಸಾವಿರ ರು. ನೀಡಿ ಆಕರ್ಷಕ ಕಲಾಕೃತಿಯನ್ನು ಭಾನುವಾರ ಖರೀದಿ ಮಾಡಿದ್ದಾರೆ...

ಬೆಂಗಳೂರು: ಕಲಾವಿದನೊಬ್ಬನ ಕಲಾಕೃತಿಗೆ ಮನಸೋತ ಗೃಹ ಸಚಿವ ಜಿ. ಪರಮೇಶ್ವರ ಅವರು 95 ಸಾವಿರ ರು. ನೀಡಿ ಆಕರ್ಷಕ ಕಲಾಕೃತಿಯನ್ನು ಭಾನುವಾರ ಖರೀದಿ ಮಾಡಿದ್ದಾರೆ.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಭಾನುವಾರ ನಡೆದ ಚಿತ್ರ ಸಂತೆಯನ್ನು ಉದ್ಘಾಟಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಲಾವಿದರ ಆಕರ್ಷಕ ಚಿತ್ರಗಳನ್ನು  ನೋಡಿ ಮನಸೋತರು. ಅಲ್ಲದೆ ಉತ್ತರ ಪ್ರದೇಶ ಮೂಲದ ಕಲಾವಿದನೊಬ್ಬ ಬಿಡಿಸಿದ್ದ ಸುಂದರ ಕಲಾಕೃತಿಯನ್ನು 95 ಸಾವಿರ ರು. ನೀಡಿ ಖರೀದಿಸಿ ಕಲಾವಿದನನ್ನು ಪ್ರೋತ್ಸಾಹಿಸುವ ಮೂಲಕ  ತಮ್ಮ ಕಲಾಸಕ್ತಿಯನ್ನು ತೋರಿದರು.

ಉತ್ತರ ಪ್ರದೇಶದ ಅಂಗವಿಕಲ ಕಲಾವಿದ ಮೋಹಿತ್ ವರ್ಮಾ ಎಂಬುವವರು `ಸಂಜೆಯ ದೀಪದ ಬೆಳಕಿನಲ್ಲಿ ಅಲಂಕೃತಗೊಂಡು ಗಂಡನ ನಿರೀಕ್ಷೆಗಾಗಿ ಕಾದು ಕುಳಿತಿರುವ ಸುಂದರ ಮಹಿಳೆ’ಯ  ಅಪೂರ್ವ ಕಲಾಕೃತಿ ರಚಿಸಿದ್ದರು. ಚಿತ್ರಸಂತೆಯ ಉದ್ಘಾಟನೆಗೂ ಮುನ್ನ ಚಿತ್ರ ಕಲಾವಿದರ ಕಲಾಕೃತಿಗಳನ್ನು ವೀಕ್ಷಿಸುತ್ತಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಈತ ರಚಿಸಿದ್ದ ಕಲಾಕೃತಿಯನ್ನು   ಯಾವುದೇ ಚೌಕಾಸಿ ಮಾಡದೆ ಖರೀದಿಸಿ ಸಂತಸಪಟ್ಟರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಮ್ಮ ಕೃತಿಯನ್ನು ಖರೀದಿಸಿದ್ದಕ್ಕೆ ಸಂತಸಗೊಂಡ ಕಲಾವಿದ ಮೋಹಿತ್ ವರ್ಮಾ ಇದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣ ಎಂದು ಬಾವುಕರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT