ಜಿಲ್ಲಾ ಸುದ್ದಿ

ಸೋನಿಯಾ, ರಾಹುಲ್ ಗೆ ಜಾಮೀನು ಸಿಗಲೆಂದು ತಿರುಪತಿ ತಿಮ್ಮಪ್ಪನಿಗೆ ಬೆರಳು ಹರಕೆ!

Sumana Upadhyaya

ಬೆಂಗಳೂರು: ತಮ್ಮ ನೆಚ್ಚಿನ ಸಿನಿಮಾ ನಟರ, ರಾಜಕಾರಣಿಗಳ ಒಳಿತಿಗಾಗಿ ಅಭಿಮಾನಿಗಳು ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ ಈ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದುಂಟು. ಇಲ್ಲಿ ಆಗಿದ್ದು ಅದುವೇ.

ತಿರುಪತಿ ತಿಮ್ಮಪ್ಪನಿಗೆ ನಿತ್ಯ ಲಕ್ಷಾಂತರ, ಕೋಟ್ಯಾಂತರ ಹಣ, ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಹರಕೆಯಾಗಿ ಹರಿದು ಬರುತ್ತದೆ. ಆದರೆ ಇಲ್ಲಿ ಹರಕೆಯಾಗಿ ಹುಂಡಿಗೆ ಬಿದ್ದದ್ದು ಕೈಯ ಕಿಂಕಿಣಿ ಬೆರಳು.

ನ್ಯಾಷನಲ್ ಹೆರಾಲ್ಡ್  ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾಮೀನು ಸಿಗಲೆಂದು ಬೆಂಗಳೂರಿನ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಎಂಬುವವರು ಡಿಸೆಂಬರ್ 25ರಂದು ತಿರುಪತಿ ತಿಮ್ಮಪ್ಪನಿಗೆ ಎಡಗೈಯ ಕಿರು ಬೆರಳನ್ನು ಕತ್ತರಿಸಿ ಹುಂಡಿಗೆ ಹಾಕಿದ್ದಾರೆ.

ಅಂದಹಾಗೆ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿಂದ ಜಾಮೀನು ಕೂಡ ಮಂಜೂರಾಗಿದೆ. ಸುರೇಶ್ ಅವರ ಹರಕೆ ಫಲಿಸಿತೋ ಏನೋ. ಅಂತೂ ತಮ್ಮ ಪಕ್ಷದ ಅಧ್ಯಕ್ಷೆಗೆ ಜಾಮೀನು ಸಿಕ್ಕಿದ ತೃಪ್ತಿ ಸುರೇಶ್  ಅವರದ್ದು.

SCROLL FOR NEXT