ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಯಾಕೂಬ್ ಕೊಲೆ ಆರೋಪಿಗಳ ಬಂಧನ

ಸೈಯದ್ ಯಾಕೂಬ್ ಕೊಲೆ ಪ್ರಕರಣ ಭೇದಿಸಿರುವ ಜಗಜೀವನರಾಂ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು...

ಬೆಂಗಳೂರು: ಸೈಯದ್ ಯಾಕೂಬ್ ಕೊಲೆ ಪ್ರಕರಣ ಭೇದಿಸಿರುವ ಜಗಜೀವನರಾಂನಗರ  ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಪುರ ನಿವಾಸಿ ಅಬ್ದುಲ್ ಸುಬಾನ್(28), ವಾಲ್ಮಿಕಿನಗರದ ಆರೀಫ್(24), ಗಂಗೋಡನಹಳ್ಳಿಯ ಸೈಯದ್ ವಸೀಂ(27) ಮತ್ತು ವಾಲ್ಮಿಕಿನಗರದ ಇಮ್ರಾಝ್ (25) ಬಂಧಿತ  ಆರೋಪಿಗಳು. ಸಾಲದ ಹಣ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಾದರಾಯನಪುರದ ನಿವಾಸಿಯಾದ ಸೈಯದ್ ಯಾಕುಬ್, ಆರೋಪಿ ಅಬ್ದುಲ್ ಸುಬಾನ್ ಬಳಿ ಕೈಸಾಲ ಪಡೆದಿದ್ದ. ಇತ್ತೀಚೆಗೆ ಸುಬಾನ್ ಸಾಲ ವಾಪಸು  ಕೇಳಲು ಹೋದಾಗ ಯಾಕುಬ್ ಹಣ ನೀಡದೆ ಜಗಳ ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಸುಬಾನ್ ತನ್ನ ಮೂವರು ಸ್ನೇಹಿತರನ್ನು ಸೇರಿಸಿಕೊಂಡು ಹೊಸ ವರ್ಷದ ದಿನ (ಜ.1) ಬೆಳಗಿನ ಜಾವ 1.30ರ  ಸುಮಾರಿನಲ್ಲಿ ಯಾಕುಬ್ ನನ್ನು ಆಟೋರಿಕ್ಷಾದಲ್ಲಿ ಅಪಹರಿಸಿದ್ದರು. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಯಾಕುಬ್ ಮೇಲೆ ಹಲ್ಲೆ  ನಡೆಸಿ ಗಂಭೀರವಾಗಿ   ಗಾಯಗೊಳಿಸಿದ್ದರು. ಬಳಿಕ ಅದೇ ಆಟೋರಿಕ್ಷಾದಲ್ಲಿ ವಿಕ್ಟೋರಿಯಾ ಆಸ್ಪತ್ರೆವರೆಗೆ ಕರೆತಂದು ಗೇಟ್  ಬಳಿ ಮಲಗಿಸಿ ಪರಾರಿಯಾಗಿದ್ದರು.

ಗಂಭೀರ ಹಲ್ಲೆಯಿಂದ  ತೀವ್ರವಾಗಿ ರಕ್ತಸ್ರಾವವಾಗಿ ಹೊರಳಾಡುತ್ತಿದ್ದ ಯಾಕೂಬ್ ನನ್ನು ಕಂಡ ಕೆಲ ಅಪರಿಚಿತರು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಬೆಳಗ್ಗೆ 9.20ರ ವೇಳೆಗೆ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ  ದಾಖಲಿಸಿಕೊಂಡಿದ್ದ ಜೆಜೆ ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು  ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಯಾಕುಬ್‍ನ ಕೊಲೆ ರಹಸ್ಯ ಬಯಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT