ಕನ್ನಡ ಸಂಘರ್ಷ ಸಮಿತಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಅನಿಕೇತನ-ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಎ.ಆರ್.ನಾರಾಯಣಘಟ್ಟ, ಕವಯಿತ್ರ 
ಜಿಲ್ಲಾ ಸುದ್ದಿ

ನಾಡಗೀತೆ ವೈಚಾರಿಕತೆಯ ಸಂಕೇತ

ನಾಡಗೀತೆ ಎನ್ನುವುದು ನಮ್ಮ ವೈಚಾರಿಕತೆ ಮತ್ತು ಸಂಪ್ರದಾಯದ ಸಂಕೇತ. ಅದರ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ...

ಬೆಂಗಳೂರು: ನಾಡಗೀತೆ ಎನ್ನುವುದು ನಮ್ಮ ವೈಚಾರಿಕತೆ ಮತ್ತು ಸಂಪ್ರದಾಯದ ಸಂಕೇತ. ಅದರ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಂಘರ್ಷ ಸಮಿತಿಯ ಅನಿಕೇತ ನ ಮತ್ತು ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಾಡಗೀತೆ ದೊಡ್ಡದಿದೆ ಎಂಬ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದಾರೆ. ಕುವೆಂಪು ರಚಿಸಿರುವ ಈ ಗೀತೆ ಸರ್ಕಾರದ ಮತ್ತು ಜನರ ಮನ್ನಣೆಗಳಿಸಿದೆ. ಅಲ್ಲದೆ, ದೇಶದ ಭೌಗೋಳಿಕ, ವೈಚಾರಿಕ, ಧಾರ್ಮಿಕ ವಿಚಾರಗಳನ್ನೊಳಗೊಂಡಿರುವ ನಾಡಗೀತೆ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದು ನಿಲ್ಲಬೇಕು.ಕುವೆಂಪು ಅವರು ಶ್ರೇಷ್ಠ ಸಾಹಿತಿ ಯಾಗಿದ್ದು, ನಾಡಿನ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಿದೆ. ರಾಜ್ಯ ಸರ್ಕಾರ ಅವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ದೇವರು ಮನುಷ್ಯ ಜಾತಿಯನ್ನು ಸೃಷ್ಟಿಸಿದ್ದಾನೆ. ಆದರೆ, ಆ ಮನುಷ್ಯ ಹಲವು ಮತಗಳನ್ನು ಸೃಷ್ಟಿಸಿ ತಮ್ಮೊಳಗೆ ಜಗಳವಾಡುತ್ತಿದ್ದಾರೆ. ಧರ್ಮವನ್ನು ಒಂದುಗೂಡಿಸಲು ಸರ್ವಧರ್ಮ ಸಮ್ಮೇಳನಗಳ ನ್ನು ನಡೆಸಲಾಗುತ್ತಿದೆ. ಆದರೆ, ಆ ಶಬ್ದವೇ ಸರಿಯಲ್ಲ. ಪ್ರತಿಯೊಬ್ಬರ ಸಾಧನೆಗೆ ತಕ್ಕಂತೆ ಅವರ ವ್ಯಕ್ತಿತ್ವ ಮತ್ತು ಅವರು ಬೇರೆಯವರಿಗೆ ಆದರ್ಶವಾಗುತ್ತಾ ರೆ. ಪ್ರತಿಯೊಬ್ಬರು ತಮ್ಮ ಒಳ್ಳೆಯತನ ದಿಂದ ಆದರ್ಶಪ್ರಾಯರಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಎ.ಆರ್.ನಾರಾಯಣಘಟ್ಟ ಅವರಿಗೆ ಅನಿಕೇತನ ಮತ್ತು ಕವಯತ್ರಿ ಆರ್.ಮಾನಸಾ ಅವರಿಗೆ ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ವೇಳೆ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ತಮಿಳ್ ಸೆಲ್ವಿ, ಸಮಿತಿ ಅಧ್ಯಕ್ಷ ಗಾಯತ್ರಿ ರಾಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT