ಸಂಕ್ರಮಣ ಪ್ರಕಾಶನ ಹೊರತಂದಿರುವ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ಕನ್ನಡ ಕವನಗಳ ಹಿಂದಿ ಅನುವಾದ `ಸೀತಾಯನ' ಪುಸ್ತಕವನ್ನು ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಬ 
ಜಿಲ್ಲಾ ಸುದ್ದಿ

ಮೂಲಭೂತವಾದಿ ಗುಣ ತೊಲಗಲಿ

ಸ್ವ ಜಾತಿಗಳಲ್ಲಿನ ಮೂಲಭೂತವಾದಿ ಗುಣ ತೊಲಗಿಸಿ, ಜಾತ್ಯತೀತ ಗುಣಗಳ ಮನೋಧರ್ಮ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ತಿಳಿಸಿದರು...

ಬೆಂಗಳೂರು: ಸ್ವ ಜಾತಿಗಳಲ್ಲಿನ ಮೂಲಭೂತವಾದಿ ಗುಣ ತೊಲಗಿಸಿ, ಜಾತ್ಯತೀತ ಗುಣಗಳ ಮನೋಧರ್ಮ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ತಿಳಿಸಿದರು.

ಸಂಕ್ರಮಣ ಪ್ರಕಾಶನ ಹೊರತಂದಿರುವ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ಕನ್ನಡ ಕವನಗಳ ಹಿಂದಿ ಅನುವಾದ `ಸೀತಾಯನ' ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಯಾವುದೇ ಜಾತಿ ಆಗಿರಲಿ. ಸಮಾಜದ ಹಿತದೃಷ್ಟಿಯಿಂದ ಈ ಜಾತಿಯೊಗಿನ ಮೂಲಭೂತ ಗುಣಗಳನ್ನು ತೊಲಗಿಸಬೇಕು ಎಂದು ಹೇಳಿದರು.

ಮಡಿವಂತಿಕೆ ಬಿಟ್ಟು ಎಲ್ಲ ವಿಧದ ವಸ್ತುಗಳನ್ನು ಸಾಹಿತ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಚಂಪಾ ಅವರಂತಹ ಸಾಹಿತಿಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ದೇಶದೆಲ್ಲೆಡೆ ಅವರ ಸಾಹಿತ್ಯ ಪಸರಿಸಬೇಕು. ಇಲ್ಲವಾದಲ್ಲಿ ನಮ್ಮಲ್ಲಿನ ಪ್ರತಿಭೆಗಳು ಹೊರ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹಿಂದಿ ಸಾಹಿತ್ಯದಿಂದ ಹಲವಾರು ಕಾದಂಬ-ರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಆದರೆ ಕನ್ನಡದಿಂದ ಹಿಂದಿಗೆ ಭಾಷಾಂತರಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಮತ್ತಷ್ಟು ಸಾಹಿತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸುವ ಕಾರ್ಯವಾಗಲಿ ಎಂದು ಸಲಹೆ ನೀಡಿದರು.ಚಂಪಾ ಅವರ ಸಾಹಿತ್ಯ ತುಂಬಾ ವರ್ಷಗಳ ಹಿಂದೆಯೇ ಅನುವಾದಗೊಳ್ಳಬೇಕಿತ್ತು.

ತಡವಾಗಿಯಾದರೂ ಹಿಂದಿಗೆ ಅನುವಾದಗೊಳ್ಳುತ್ತಿರುವುದು ಸಂತಸದ ವಿಷಯ. ನೆರೆ ರಾಜ್ಯಗಳ ಭಾಷೆಗಳಿಗೂ ಅನುವಾದ ಮಾಡುವ ಕೆಲಸವನ್ನು ಭಾಷಾ ಭಾರತಿ ಮಾಡಬೇಕಿದೆ. 1960ರಿಂದ 2010ರ ವರೆಗಿನ ಚಂಪಾ ಸಾಹಿತ್ಯ ಕುರಿತ ಅಧ್ಯಯನ ನಡೆಯಬೇಕಿದ್ದು, ಈ ರೀತಿಯ ಅಧ್ಯಯನಗಳನ್ನು ವಿಶ್ವವಿದ್ಯಾಲಯಗಳು ಕೈಗೆತ್ತಿಕೊಳ್ಳಬೇಕಿದೆ ಎಂದರು. ಕೃತಿ ಕುರಿತು ಡಾ.ಎಚ್.ವಿ. ರಾಮಚಂದ್ರರಾವ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಅನುವಾದಕ ಪ್ರೊ. ಧರಣೇಂದ್ರ ಕುರಕುರಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT