ಸಂಕ್ರಮಣ ಪ್ರಕಾಶನ ಹೊರತಂದಿರುವ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ಕನ್ನಡ ಕವನಗಳ ಹಿಂದಿ ಅನುವಾದ `ಸೀತಾಯನ' ಪುಸ್ತಕವನ್ನು ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಬ 
ಜಿಲ್ಲಾ ಸುದ್ದಿ

ಮೂಲಭೂತವಾದಿ ಗುಣ ತೊಲಗಲಿ

ಸ್ವ ಜಾತಿಗಳಲ್ಲಿನ ಮೂಲಭೂತವಾದಿ ಗುಣ ತೊಲಗಿಸಿ, ಜಾತ್ಯತೀತ ಗುಣಗಳ ಮನೋಧರ್ಮ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ತಿಳಿಸಿದರು...

ಬೆಂಗಳೂರು: ಸ್ವ ಜಾತಿಗಳಲ್ಲಿನ ಮೂಲಭೂತವಾದಿ ಗುಣ ತೊಲಗಿಸಿ, ಜಾತ್ಯತೀತ ಗುಣಗಳ ಮನೋಧರ್ಮ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ತಿಳಿಸಿದರು.

ಸಂಕ್ರಮಣ ಪ್ರಕಾಶನ ಹೊರತಂದಿರುವ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ಕನ್ನಡ ಕವನಗಳ ಹಿಂದಿ ಅನುವಾದ `ಸೀತಾಯನ' ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಯಾವುದೇ ಜಾತಿ ಆಗಿರಲಿ. ಸಮಾಜದ ಹಿತದೃಷ್ಟಿಯಿಂದ ಈ ಜಾತಿಯೊಗಿನ ಮೂಲಭೂತ ಗುಣಗಳನ್ನು ತೊಲಗಿಸಬೇಕು ಎಂದು ಹೇಳಿದರು.

ಮಡಿವಂತಿಕೆ ಬಿಟ್ಟು ಎಲ್ಲ ವಿಧದ ವಸ್ತುಗಳನ್ನು ಸಾಹಿತ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಚಂಪಾ ಅವರಂತಹ ಸಾಹಿತಿಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ದೇಶದೆಲ್ಲೆಡೆ ಅವರ ಸಾಹಿತ್ಯ ಪಸರಿಸಬೇಕು. ಇಲ್ಲವಾದಲ್ಲಿ ನಮ್ಮಲ್ಲಿನ ಪ್ರತಿಭೆಗಳು ಹೊರ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹಿಂದಿ ಸಾಹಿತ್ಯದಿಂದ ಹಲವಾರು ಕಾದಂಬ-ರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಆದರೆ ಕನ್ನಡದಿಂದ ಹಿಂದಿಗೆ ಭಾಷಾಂತರಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಮತ್ತಷ್ಟು ಸಾಹಿತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸುವ ಕಾರ್ಯವಾಗಲಿ ಎಂದು ಸಲಹೆ ನೀಡಿದರು.ಚಂಪಾ ಅವರ ಸಾಹಿತ್ಯ ತುಂಬಾ ವರ್ಷಗಳ ಹಿಂದೆಯೇ ಅನುವಾದಗೊಳ್ಳಬೇಕಿತ್ತು.

ತಡವಾಗಿಯಾದರೂ ಹಿಂದಿಗೆ ಅನುವಾದಗೊಳ್ಳುತ್ತಿರುವುದು ಸಂತಸದ ವಿಷಯ. ನೆರೆ ರಾಜ್ಯಗಳ ಭಾಷೆಗಳಿಗೂ ಅನುವಾದ ಮಾಡುವ ಕೆಲಸವನ್ನು ಭಾಷಾ ಭಾರತಿ ಮಾಡಬೇಕಿದೆ. 1960ರಿಂದ 2010ರ ವರೆಗಿನ ಚಂಪಾ ಸಾಹಿತ್ಯ ಕುರಿತ ಅಧ್ಯಯನ ನಡೆಯಬೇಕಿದ್ದು, ಈ ರೀತಿಯ ಅಧ್ಯಯನಗಳನ್ನು ವಿಶ್ವವಿದ್ಯಾಲಯಗಳು ಕೈಗೆತ್ತಿಕೊಳ್ಳಬೇಕಿದೆ ಎಂದರು. ಕೃತಿ ಕುರಿತು ಡಾ.ಎಚ್.ವಿ. ರಾಮಚಂದ್ರರಾವ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಅನುವಾದಕ ಪ್ರೊ. ಧರಣೇಂದ್ರ ಕುರಕುರಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT