ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಗ್ರಾಹಕರ ಸೋಗಿನಲ್ಲಿ ಆಭರಣ ದೋಚಿ ಪರಾರಿ

ನಾಗರಬಾವಿ ವೃತ್ತದ ‘ಜಯಶ್ರೀ ಜ್ಯುವೆಲರ್ಸ್’ ಮಳಿಗೆಗೆ ಬಂದ ಮೂವರು ಮಹಿಳೆಯರು, ನೌಕರನ ಗಮನ ಬೇರೆಡೆ ಸೆಳೆದು ಎರಡು ಚಿನ್ನದ ಸರಗಳನ್ನು ಎಗರಿಸಿ ...

ಬೆಂಗಳೂರು:  ನಾಗರಬಾವಿ ವೃತ್ತದ ‘ಜಯಶ್ರೀ ಜ್ಯುವೆಲರ್ಸ್’ ಮಳಿಗೆಗೆ ಬಂದ ಮೂವರು ಮಹಿಳೆಯರು, ನೌಕರನ ಗಮನ ಬೇರೆಡೆ ಸೆಳೆದು ಎರಡು ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಳಿಗೆಗೆ ಬಂದು, ಹೊಸ ವಿನ್ಯಾಸದ ಸರಗಳನ್ನು ತೋರಿಸುವಂತೆ ಕೇಳಿದ್ದಾರೆ. ಆಗ ನೌಕರ 10 ಸರಗಳಿರುವ ಟ್ರೇಯನ್ನು ಆ ಮಹಿಳೆಯರ ಮುಂದಿಟ್ಟಿದ್ದಾನೆ.

ಈ ಹಂತದಲ್ಲಿ ಒಬ್ಬಾಕೆ, ‘ಆ ಸರ ತೋರಿಸಿ, ಈ ಸರ ತೋರಿಸಿ’ ಎನ್ನುತ್ತ ನೌಕರನ ಗಮನ ಬೇರೆಡೆ ಸೆಳೆದಿದ್ದಾಳೆ. ಆಕೆ ತೋರಿಸಿದ ಸರಗಳನ್ನು ತೆಗೆಯಲು ನೌಕರ ತಿರುಗಿಕೊಳ್ಳುತ್ತಿದ್ದಂತೆಯೇ, ಒಬ್ಬಳು ಟ್ರೇಯಲ್ಲಿದ್ದ ಎರಡು ಸರಗಳನ್ನು ತೆಗೆದು ಹಿಂದೆ ನಿಂತಿದ್ದವಳಿಗೆ ಕೊಟ್ಟಿದ್ದಾಳೆ. ಆಕೆ ಅವುಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾಳೆ.

ಹೀಗೆ 20 ನಿಮಿಷಗಳ ಕಾಲ ಸರ ನೋಡಿದ ಕಳ್ಳಿಯರು, ಎಲ್ಲ ಓಲ್ಡ್ ಮಾಡೆಲ್. ಯಾವುದೂ ಇಷ್ಟವಾಗುತ್ತಿಲ್ಲ. ಮತ್ತೆ ಎಂದಾದರೂ ಬರುತ್ತೇವೆ’ ಎಂದು ಹೊರಟು ಹೋಗಿದ್ದಾರೆ. ಆ ನಂತರ ನೌಕರ ಟ್ರೇಯನ್ನು ತೆಗೆದು ಒಳಗಿಟ್ಟಿದ್ದಾನೆ. ಬುಧವಾರ ಬೆಳಿಗ್ಗೆ ಇತರೆ ಗ್ರಾಹಕರು ಆಭರಣ ಖರೀದಿಗೆ ಬಂದಾಗ ನೌಕರ ಅದೇ ಟ್ರೇಯನ್ನು ಮುಂದಿಟ್ಟಿದ್ದಾನೆ. ಈ ಹಂತದಲ್ಲಿ ಹೊಸ ವಿನ್ಯಾಸದ ಎರಡು ಸರಗಳು ನಾಪತ್ತೆಯಾಗಿರುವುದು ಆತನ ಗಮನಕ್ಕೆ ಬಂದಿದೆ. ಈ ವಿಷಯವನ್ನು ಕೂಡಲೇ ಮಾಲೀಕ ಬೊಂಕೇಶ್ ಅವರಿಗೆ ತಿಳಿಸಿದ್ದಾನೆ. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳಿಯರ ಕೃತ್ಯ ಬಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT