ಅಂಬೇಡ್ಕರ್ ಭಾವಚಿತ್ರವಿರುವ ಪೇಪರ್ ಪ್ಲೇಟ್ 
ಜಿಲ್ಲಾ ಸುದ್ದಿ

ಪೇಪರ್ ಪ್ಲೇಟ್ ನಲ್ಲಿ ಅಂಬೇಡ್ಕರ್ ಚಿತ್ರ

ಡಾ. ಅಂಬೇಡ್ಕರ್ ಹೆಸರಿಗೆ ಒಂದಲ್ಲೊಂದು ರೀತಿಯಲ್ಲಿ ಪದೇಪದೆ ಮಸಿ ಬಳಿಯಲಾಗುತ್ತಿದೆ. ನಗರದಲ್ಲೂ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆಂದು...

ಚಳ್ಳಕೆರೆ: ಡಾ. ಅಂಬೇಡ್ಕರ್  ಹೆಸರಿಗೆ ಒಂದಲ್ಲೊಂದು ರೀತಿಯಲ್ಲಿ ಪದೇಪದೆ ಮಸಿ ಬಳಿಯಲಾಗುತ್ತಿದೆ.  ನಗರದಲ್ಲೂ  ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಸಂಘಟನೆಗಳ ಮುಖಂಡರು ಮಂಗಳವಾರ ಅಂಗಡಿಯೊಂದಕ್ಕೆ ಬೀಗಮುದ್ರೆ ಜಡಿಸಿದ್ದಾರೆ.

ನಗರಸಭೆ ಆಡಳಿತ ಮಂಡಳಿ ಧ್ವಜಾರೋಹಣ ನೆರವೇರಿಸಿದ ಬಳಿಕ ಆಹ್ವಾನದ ಮೇರೆಗೆ ಶಾಸಕ ಟಿ, ರಘುಮೂರ್ತಿ ಹಾಗೂ ತಹಶಿಲ್ದಾರ್ ಎಸ್ ಪಂಡಿತ್ ಉಪಹಾರಕ್ಕೆ ಆಗಮಿಸಿದ್ದರು.  ಉಪಹಾರ ವಿತರಣೆ ಮಾಡಿದ ಪೇಪರ್ ಪ್ಲೇಟ್ ಗಳಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರವಿತ್ತು. ತಿಂಡಿ ತಿಂದು ಬಿಸಾಡುವ ಪ್ಲೇಟಿನಲ್ಲಿ ಡಾ. ಅಂಬೇಡ್ಕರ್  ಭಾವಚಿತ್ರ ಇರುವುದನ್ನು ನಗರ ಸಭಾ ಸದಸ್ಯ ಟಿ.ಜೆ ವೆಂಕಟೇಶ್ ಗಮನಿಸಿ ಆಕ್ರೋಶ ವ್ಯಕ್ತ ಪಡಿಸಿದರು.

ಅಂಬೇಡ್ಕರ್ ಭಾವಚಿತ್ರ ವಿರುವ ಉಪಾಹಾರದ ಪ್ಲೇಟ್ ಮಾರುತ್ತಿರುವ ವ್ಯಾಪಾರಿಗಳು ಹಾಗೂ ತಯಾರಿಕಾ ಘಟಕದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಹಾಗೂ ಪೌರಾಯುಕ್ತರಿಗೆ ನಗರಸಭೆ ಅಧ್ಯಕ್ಷರು, ಸದಸ್ಯರು, ದಲಿತ ಮುಖಂಡರು ಮನವಿ ಸಲ್ಲಿಸಿದರು. ಶಾಸಕ ಟಿ. ರಘುಮೂರ್ತಿ, ತಹಸೀಲ್ದಾರ್ ಶ್ರೀಧರ್​ಮೂರ್ತಿ ಜನಪ್ರತಿನಿಧಿಗಳು ತಾಲೂಕು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ವೇದಿಕೆಗೆ ಹೋಗುವ ಮುನ್ನ ನಗರಸಭೆಗೆ ಉಪಹಾರಕ್ಕೆ ತೆರಳಿದ್ದಾರೆ. ಅಲ್ಲಿ ತಂದಿದ್ದ ಪೇಪರ್ ಪ್ಲೇಟ್​ಗಳಲ್ಲಿ ಅಂಬೇಡ್ಕರ್, ಮೋದಿ ಮತ್ತಿತರ ರಾಷ್ಟ್ರನಾಯಕರ ಭಾವಚಿತ್ರ ಇದ್ದವು. ಇವುಗಳನ್ನು ಕಂಡ ವಿತರಕರು ಅಧಿಕಾರಿಗಳಿಗೆ ಕೊಡದೆ ಮರೆಮಾಚಿದ್ದಾರೆ. ಕೂಡಲೇ ರಾಷ್ಟ್ರನಾಯಕರ ಭಾವಚಿತ್ರವಿರುವ ಪ್ಲೇಟ್ ಮಾರಾಟ ಮತ್ತು ತಯಾರು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT