ಜಿಲ್ಲಾ ಸುದ್ದಿ

ರಮೇಶ್ ಆರೋಪದಲ್ಲಿ ಹುರುಳಿಲ್ಲ

Manjula VN

ಬೆಂಗಳೂರು: ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ರಾಜಕೀಯ ದ್ವೇಷದ ಮಾತುಗಳನ್ನು ಆಡುವ ಮೂಲಕ ಈಗಿನ ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನ ಕೆಲ ಶಾಸಕರ ಒತ್ತಡಕ್ಕೆ ಮಣಿದ ಬಿಬಿಎಂಪಿ ಅಧಿಕಾರಿಗಳು ಸುಮಾರು ರು. 155 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ರಮೇಶ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಸತ್ಯನಾರಾಯಣ, ಬಿಬಿಎಂಪಿಯಲ್ಲಿ ಅಂತಹ ಯಾವುದೇ ಹಗರಣ ನಡೆದಿಲ್ಲ. ಬಿಬಿಎಂಪಿ ಅಧಿಕಾರ ಹಿಡಿಯುವಲ್ಲಿ ರಾಜರಾಜೇಶ್ವರಿನಗರ ಕೆ.ಆರ್.ಪುರಂ, ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರು ಕಾರಣರಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ದ್ವೇಷದಿಂದ ರಮೇಶ್ ಆರೋಪ ಮಾಡಿದ್ದಾರೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಬಂದ ಬಳಿಕ ಇದುವರೆಗೆ ಒಂದೇ ಒಂದೂ ಎಲ್ ಒಸಿ ಕೊಟ್ಟಿಲ್ಲ ಎಂಬುದನ್ನು ರಮೇಶ್ ಮನಗಾಣಬೇಕು ಎಂದು ತಾಕೀತು ಮಾಡಿದ್ದಾರೆ.

ಬಿಬಿಎಂಪಿಯಿಂದ ಕಾಮಗಾರಿ ಮುಗಿಯುವ ಮುನ್ನವೇ ಹಣ ನೀಡಲಾಗಿದೆ ಎಂಬ ಆರೋಪವೂ ನಿರಾಧಾರದಿಂದ ಕೂಡಿದೆ ಎಂದು ಸತ್ಯಾನಾರಾಯಣ ಸ್ಪಷ್ಟನೆ ನೀಡಿದ್ದಾರೆ.

SCROLL FOR NEXT