ಬಾಗಲಕೋಟೆ

ಕನ್ನಡದ ಮೊದಲ ಶಾಸನ ಹಲ್ಮಿಡಿ ಅಲ್ಲ, ತಗರ್ತಿ

ಬಾಗಲಕೋಟೆ: ಕನ್ನಡದ ಮೊದಲ ಶಾಸನ ಹಲ್ಮಿಡಿ ಅಲ್ಲ. ಚಿತ್ರದುರ್ಗ ಜಿಲ್ಲೆಯ ತಗರ್ತಿ ಶಾಸನ!
ಈವರೆಗೂ ಕನ್ನಡ ಸಾರಸ್ವತ ಲೋಕ ನಂಬಿಕೊಂಡು ಬಂದಿರುವ ಮತ್ತು ಅದೇ ಸತ್ಯ ಎಂದು ಪ್ರತಿಪಾದಿಸುತ್ತಿರುವ ಸಾಹಿತ್ಯ ದಿಗ್ಗಜರ ನಂಬುಗೆಯನ್ನೇ ಬುಡಮೇಲು ಮಾಡುವ ಹೊಸದಾದ ಮತ್ತು ಅಷ್ಟೇ ಕ್ರಾಂತಿಕಾರಕ ಎನಿಸಿರುವ ಸತ್ಯವೊಂದನ್ನು ರಾಜ್ಯದ ಹೆಸರಾಂತ ಇತಿಹಾಸಕಾರ ಡಾ. ಷ. ಶೆಟ್ಟರ್ ಮಂಡಿಸುವ ಮೂಲಕ ಹೊಸ ಚಿಂತನೆಗೆ ನಾಂದಿ ಹಾಡಿದ್ದಾರೆ.  
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ, ಕರ್ನಾಟಕ ಜಾನಪದ ಪರಿಷತ್ ಜಂಟಿಯಾಗಿ ಶನಿವಾರ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಆಯೋಜಿಸಿದ್ದ ಎರಡು ದಿನಗಳ 'ಅಖಿಲ ಕರ್ನಾಟಕ 9ನೇ ಹಸ್ತಪ್ರತಿ ಸಮ್ಮೇಳನ'ವನ್ನು ಉದ್ಘಾಟಿಸಿ, ಕರ್ನಾಟಕದಲ್ಲಿ ಕ್ರಿ.ಶ. 360ರ ಹೊತ್ತಿಗೆ ಕನ್ನಡ ಭಾಷೆ ಸಮೃದ್ಧವಾಗಿತ್ತು. ಅದಕ್ಕೂ ಹಿಂದೆ ಅಂದರೆ ಸುಮಾರು ಕ್ರಿ.ಶ. 350ರಲ್ಲಿ ಚಿತ್ರದುರ್ಗದ ತಗರ್ತಿ ಬಳಿ ಗಂಗರ ಅರಸರು ಶಾಸನ ಕೊರೆಸಿದರು. ನಂತರ ಕೆಲವೇ ವರ್ಷಗಳ ಅಂತರದಲ್ಲಿ ಹಿರೇಹಡಗಲಿ ಮ್ಯಾಕಡೋಲಿ, ಶಿವಪುರ ಶಾಸನಗಳು ರಚಿತವಾಗಿದ್ದು ಗಮನಕ್ಕೆ ಬರುತ್ತವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

Explainer: ಮಿತವ್ಯಯಕ್ಕೆ ಮೋದಿ ಕರೆ: ಕಷ್ಟದ ದಿನಗಳೋ? Forex ಉಳಿಕೆಯ ಮರ್ಮವೋ..? 72ಬಿಲಿಯನ್ $ ಹಿಂದಿನ ರಹಸ್ಯ

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ.’; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ, Video!

ತುಮಕೂರು: ದೇವರಾಯನದುರ್ಗ ಬೆಟ್ಟದಿಂದ ಜಿಗಿದು PWD ಸಹಾಯಕ ಇಂಜಿನಿಯರ್ ಆತ್ಮಹತ್ಯೆ; ಕಾರಣ ನಿಗೂಢ

Video: ಆರಂಭದಲ್ಲೇ TVK ಸರ್ಕಾರಕ್ಕೆ ವಿಘ್ನ: ತಮಿಳುನಾಡಿನ ಏಕೈಕ ಮಹಿಳಾ ಸಚಿವೆ ಎಸ್. ಕೀರ್ತನಾ ಪ್ರಮಾಣವಚನಕ್ಕೆ ಬ್ರೇಕ್, Video!

SCROLL FOR NEXT