ಬಾಗಲಕೋಟೆ: ತಾಲೂಕಿನ ಜಡ್ರಾಮಕುಂಟೆ ಬಳಿ ಮಂಗಳವಾರ ಸಂಜೆ 4.30ರ ವೇಳೆಗೆ ಚಲಿಸುತ್ತಿದ್ದ ರೈಲಿಗೆ ಕಾರು ಡಿಕ್ಕಿ ಹೊಡೆದು ಇಬ್ಬರಿಗೆ ಗಾಯಗಳಾಗಿವೆ. ತಳಗಿಹಾಳ ಗ್ರಾಮದ ಸಂಗನಗೌಡ ಚೌಧರಿ ಹಾಗೂ ಸಿರಗುಪ್ಪಿಯ ಮುತ್ತುರಾಜ ರೊಳ್ಳಿ ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಳುಬಾಳದಿಂದ ಜಡ್ರಾಮಕುಂಟಿ ಗ್ರಾಮಕ್ಕೆ ಇಂಡಿಕಾ ಕಾರಿನಲ್ಲಿ ಅವರು ತೆರಳುತ್ತಿದ್ದರು. ಮಾರ್ಗದ ಮಧ್ಯೆ ಇರುವ ಮಾನವ ರಹಿತ ಲೆವಲ್ ಕ್ರಾಸ್ ಬಳಿ ಹಳಿ ದಾಟಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಸೊಲ್ಲಾಪುರ ಗದಗ ಪ್ಯಾಸೆಂಜರ್ ರೈಲಿನ ಇಂಜಿನ್ ಕಾರಿನ ಮುಂಭಾಗಕ್ಕೆ ಬಡಿದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.