ಬಳ್ಳಾರಿ

ಐತಿಹಾಸಿಕ ಬಾವಿಗಿಲ್ಲ ರಕ್ಷಣೆ

ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಆ. 4
ತಾಲೂಕಿನ ಐತಿಹಾಸಿಕ ಬಂಡೆರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಇತಿಹಾಸ ಪ್ರಸಿದ್ಧ ಒಬಳಾನಾಯಕನ ಬಾವಿ ನಿರ್ಲಕ್ಷ್ಯಕ್ಕೆ  ಗುರಿಯಾಗಿದ್ದು, ಇತಿಹಾಸಕಾರರಿಗೆ, ಸಂಶೋಧಕರಿಗೆ ಮಾಹಿತಿಗಳ ಆಗರವಾಗಬೇಕಿದ್ದ ಬಾವಿ ಮುಳ್ಳು ಕಂಟಿಗಳಿಂದ ಆವೃತವಾಗಿದೆ.
ಪಾಳೆಗಾರರ ಕಾಲದಲ್ಲಿ ನಿರ್ಮಿಸಿದ್ದ ಈ ಒಬಳಾನಾಯಕ ಬಾವಿಯನ್ನು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಪರಿಣಾಮ ಮಹಾ ವಿಷ್ಣುವಿನ ಹಲವು ಅವತಾರಗಳನ್ನು ಒಳಗೊಂಡಂತೆ ಸುಂದರ ಕೆತ್ತನೆ ಹೊಂದಿರುವ ಒಬಳಾನಾಯಕನ ಬಾವಿ ಈಗ ಮುಳ್ಳಿನ ಗಿಡ ಪೊದೆಗಳ, ಆಲದಮರದ ಬೇರುಗಳ ಅತಿಕ್ರಮಣಕ್ಕೆ ಗುರಿಯಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ನಾಡಿನ ಇತರೆ ಐತಿಹಾಸಿಕ ಸ್ಮಾರಕಗಳಿಗೆ ದನ, ಜಾನುವಾರು, ಜನರು ಕಂಟಕವಾಗಿ ಕಾಡಿದರೆ, ಬಂಡೆರಂಗನಾಥಸ್ವಾಮಿ ಬಳಿಯ ಒಬಳಾನಾಯಕನ ಬಾವಿಗೆ ಜಾಲಿಮುಳ್ಳಿನ ಪೊದೆಗಳು, ಆಲದ ಮರದ ಬೇರುಗಳೇ ಸಮಸ್ಯೆಗೆ ಕಾರಣವಾಗಿವೆ. ವಿಸ್ತಾರವಾಗಿ ಬೆಳೆದಿರುವ ಮುಳ್ಳಿನ ಪೊದೆಗಳು ಐತಿಹಾಸಿಕ ಬಾವಿಯನ್ನೆ ಮುಚ್ಚಿದರೆ, ಇನ್ನು ಬಾವಿಯ ಗೋಡೆ, ಕಟ್ಟಡಗಳ ಸಂದಿಗೊಂದಿಗಳಲ್ಲಿ ಅಳಕ್ಕೆ ಇಳಿದಿರುವ ಆಲದ ಬೇರುಗಳು ಬಾವಿಯ ಅಸ್ತಿತ್ವವನ್ನೆ ನುಂಗುವ ಭೀತಿಯಲ್ಲಿ ಬೃಹದಾಕಾರವಾಗಿ ಬೆಳೆದಿವೆ.  ಆದರೆ ಇಲ್ಲಿಗೆ ಬರುವ ಜನ ಬಾವಿಯ ದಡದ ಮೇಲೆ ನಿಂತು ಮುಳ್ಳಿನ ಪೊದೆಯಲ್ಲಿ ಮರೆಯಾಗಿರುವ ಒಬಳಾನಾಯಕ ಬಾವಿ ನೋಡಿ ವಿಸ್ಮಯಗೊಳ್ಳುವುದಂತು ಸತ್ಯ.
- ಹುಳ್ಳಿ ಪ್ರಕಾಶ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Assam: ಶಾಸಕಾಂಗ ಪಕ್ಷದ ನಾಯಕರಾಗಿ Himanta Biswa Sarma ಆಯ್ಕೆ, ಸತತ 2ನೇ ಬಾರಿಗೆ ಸಿಎಂ!

“ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್ ಕೆಲಸ”, ಜನರ ಸಮಸ್ಯೆಗಿಂತ ಅಧಿಕಾರದ ಜಗಳವೇ ಮುಖ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

“ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ…”: ಭಾವನಾತ್ಮಕ ಭಾಷಣದೊಂದಿಗೆ ಆಡಳಿತ ಆರಂಭಿಸಿದ ಸಿಎಂ ವಿಜಯ್, ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ..!

'ಯಾರಿಗೂ ಭಯ ಅನ್ನೋದೆ ಇಲ್ಲ.. ಜೈಲಲ್ಲಿ ಕೂತ್ಕೋ ಬೇಕಾಗುತ್ತೆ': Yuzvendra Chahal ವಿಮಾನದಲ್ಲೇ ವೇಪಿಂಗ್ ಘಟನೆ ಕುರಿತು ಮಾಜಿ ಆಟಗಾರನ ಖಡಕ್ ಎಚ್ಚರಿಕೆ!

ಸಚಿವ ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ರಜೆ ಘೋಷಣೆ; 3 ದಿನ ರಾಜ್ಯಾದ್ಯಂತ ಸಂತಾಪ- ಸರ್ಕಾರ ಆದೇಶ

SCROLL FOR NEXT