ಬಳ್ಳಾರಿ

ಐತಿಹಾಸಿಕ ಬಾವಿಗಿಲ್ಲ ರಕ್ಷಣೆ

ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಆ. 4
ತಾಲೂಕಿನ ಐತಿಹಾಸಿಕ ಬಂಡೆರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಇತಿಹಾಸ ಪ್ರಸಿದ್ಧ ಒಬಳಾನಾಯಕನ ಬಾವಿ ನಿರ್ಲಕ್ಷ್ಯಕ್ಕೆ  ಗುರಿಯಾಗಿದ್ದು, ಇತಿಹಾಸಕಾರರಿಗೆ, ಸಂಶೋಧಕರಿಗೆ ಮಾಹಿತಿಗಳ ಆಗರವಾಗಬೇಕಿದ್ದ ಬಾವಿ ಮುಳ್ಳು ಕಂಟಿಗಳಿಂದ ಆವೃತವಾಗಿದೆ.
ಪಾಳೆಗಾರರ ಕಾಲದಲ್ಲಿ ನಿರ್ಮಿಸಿದ್ದ ಈ ಒಬಳಾನಾಯಕ ಬಾವಿಯನ್ನು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಪರಿಣಾಮ ಮಹಾ ವಿಷ್ಣುವಿನ ಹಲವು ಅವತಾರಗಳನ್ನು ಒಳಗೊಂಡಂತೆ ಸುಂದರ ಕೆತ್ತನೆ ಹೊಂದಿರುವ ಒಬಳಾನಾಯಕನ ಬಾವಿ ಈಗ ಮುಳ್ಳಿನ ಗಿಡ ಪೊದೆಗಳ, ಆಲದಮರದ ಬೇರುಗಳ ಅತಿಕ್ರಮಣಕ್ಕೆ ಗುರಿಯಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ನಾಡಿನ ಇತರೆ ಐತಿಹಾಸಿಕ ಸ್ಮಾರಕಗಳಿಗೆ ದನ, ಜಾನುವಾರು, ಜನರು ಕಂಟಕವಾಗಿ ಕಾಡಿದರೆ, ಬಂಡೆರಂಗನಾಥಸ್ವಾಮಿ ಬಳಿಯ ಒಬಳಾನಾಯಕನ ಬಾವಿಗೆ ಜಾಲಿಮುಳ್ಳಿನ ಪೊದೆಗಳು, ಆಲದ ಮರದ ಬೇರುಗಳೇ ಸಮಸ್ಯೆಗೆ ಕಾರಣವಾಗಿವೆ. ವಿಸ್ತಾರವಾಗಿ ಬೆಳೆದಿರುವ ಮುಳ್ಳಿನ ಪೊದೆಗಳು ಐತಿಹಾಸಿಕ ಬಾವಿಯನ್ನೆ ಮುಚ್ಚಿದರೆ, ಇನ್ನು ಬಾವಿಯ ಗೋಡೆ, ಕಟ್ಟಡಗಳ ಸಂದಿಗೊಂದಿಗಳಲ್ಲಿ ಅಳಕ್ಕೆ ಇಳಿದಿರುವ ಆಲದ ಬೇರುಗಳು ಬಾವಿಯ ಅಸ್ತಿತ್ವವನ್ನೆ ನುಂಗುವ ಭೀತಿಯಲ್ಲಿ ಬೃಹದಾಕಾರವಾಗಿ ಬೆಳೆದಿವೆ.  ಆದರೆ ಇಲ್ಲಿಗೆ ಬರುವ ಜನ ಬಾವಿಯ ದಡದ ಮೇಲೆ ನಿಂತು ಮುಳ್ಳಿನ ಪೊದೆಯಲ್ಲಿ ಮರೆಯಾಗಿರುವ ಒಬಳಾನಾಯಕ ಬಾವಿ ನೋಡಿ ವಿಸ್ಮಯಗೊಳ್ಳುವುದಂತು ಸತ್ಯ.
- ಹುಳ್ಳಿ ಪ್ರಕಾಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT