ಚಿತ್ರದುರ್ಗ

ಶಾಲೆಗೆ ನುಗ್ಗಿ ಮಕ್ಕಳಿಗೆ ಥಳಿಸಿದ!

ಚಳ್ಳಕೆರೆ: ತಾಲೂಕಿನ ವಡೇರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಧಮಿಕ ಶಾಲೆಗೆ ಬುಧವಾರ ಏಕಾಏಕಿ ನುಗ್ಗಿದ ಗ್ರಾಮದ ಚಿತ್ರ ಎಂಬ ವ್ಯಕ್ತಿ ಮನಬಂದತೆ ಮಾತನಾಡುತ್ತಾ ವಿದ್ಯಾರ್ಥಿಗಳನ್ನು ಥಳಿಸಿದ್ದಲ್ಲದೆ, ತಡೆಯಲು ಹೋದ ಶಿಕ್ಷಕರ ಮೇಲೂ ಹಲ್ಲೆ ನಡೆಸಿದ್ದಾನೆ.
ಇದರಿಂದಾಗಿ ಶಾಲಾ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಶಾಲೆಯ ಕೆಲವು ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಟಿ.ಎನ್. ಕೋಟೆಯಲ್ಲಿ ನಡೆಯುತ್ತಿರುವ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ತೆರಳಿದ್ದರು. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು ಎಲ್ಲ ತರಗತಿಗಳನ್ನು ಒಂದೆಡೆ ಸೇರಿಸಿ ಶಿಕ್ಷಕರಾದ ರುದ್ರಪ್ಪ, ಆಂಜನೇಯ ಅವರು ಪಾಠ ಮಾಡುತ್ತಿದ್ದರು.
ಆಗ ಶಾಲೆಗೆ ನುಗ್ಗಿದ ಚಿತ್ರಪ್ಪ ಒಂದನೇ ತರಗತಿಯ ಬಸವರಾಜ, ಮೂರನೇ ತರಗತಿಯ ಸಿಂಚನಾ ಬಾನು, ಪ್ರಿಯಾರನ್ನು ತಳಿಸಿದ್ದಾನೆ. ಬಸವರಾಜ ಎಂಬ ಬಾಲಕನಿಗೆ ಇತ್ತೀಚೆಗೆ ತಾನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು,  ಈ ಬಾಲಕನನ್ನೆ  ಆರೋಪಿ ಮನಬಂದತೆ ತಳಿಸಿದ್ದಾನೆ.
ಈ ಹಂತದಲ್ಲಿ ಶಿಕ್ಷಕ ಅಜ್ಜಪ್ಪ ಚಿತ್ರನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್‌ಡಿಎಂಸಿ ಸದಸ್ಯರಾದ ಅರುಣ್ ನಿಂಗಪ್ಪ, ಮಹಂತೇಶ್, ಗ್ರಾಮದ ಮುಖಂಡರಾದ ಬಸವರಾಜ, ಶ್ರೀನಿವಾಸ್‌ಮೂರ್ತಿ, ನಾಗರಾಜ, ಗೋವಿಂದಪ್ಪ ಮಹಂತೇಶ್ ಅವರು ಚಿತ್ರನ ಹಲ್ಲೆಯ ಬಗ್ಗೆ ಪರಶುರಾಮಪುರ ಠಾಣೆಗೆ ದೂರು ನೀಡಿದ್ದಾರೆ.  ಪರಶುರಾಮಪುರ ಪೊಲೀಸರು ಶಾಲೆಗೆ ಧಾವಿಸಿದ್ದಾರೆ. ಪೊಲೀಸರು ಆಗಮನವಾಗುತ್ತಿದ್ದಂತೆ ಚಿತ್ರ ಅಲ್ಲಿಂದ  ಪರಾರಿಯಾಗಿದ್ದಾನೆ.
ಘಟನೆಗೆ ಶಿಕ್ಷಕರೇ ಹೊಣೆಯಂದು ಕೆಲವು ಗ್ರಾಮಸ್ಥರು ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಂತರ ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ತೀರ್ಮಾನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT