ದಕ್ಷಿಣ ಕನ್ನಡ

ಉದ್ಯೋಗ ನೆಪದಲ್ಲಿ ಲೈಂಗಿಕ ಕಿರುಕುಳ: ಇಬ್ಬರು 'ಡೀಲ್ ಮಾಸ್ಟರ್‌'ಗಳ ಬಂಧನ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಯುವತಿಗೆ ಉದ್ಯೋಗ ಒದಗಿಸಿಕೊಡುವ ನೆಪದಲ್ಲಿ ಅಪರಿಚಿತ ಪುರುಷರ ಜೊತೆ ವ್ಯವಹರಿಸಲು ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೊಂದಿಗೆ ವ್ಯವಹಾರ ಕುದುರಿಸಿದ್ದ ಇಬ್ಬರು ಪುರುಷರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕಳೆಂಜದ 18ರ ಹರೆಯದ ಯುವತಿಯನ್ನು ನೆರೆ ಮನೆಯ ಕುಂಞಣ್ಣ ಗೌಡ ಎಂಬವರ ಪತ್ನಿ ಲಕ್ಷ್ಮಿ ಎಂಬಾಕೆ ಉಜಿರೆಯ ಬೇಕರಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಉಜಿರೆಗೆ ಕರೆದೊಯ್ದು ಅಪರಿಚಿತ ಗಂಡಸರ ಜೊತೆ ವ್ಯವಹರಿಸಲು ವ್ಯವಸ್ಥೆ ಕಲ್ಪಿಸಿದ ಬಗ್ಗೆ ದೂರಲಾಗಿದೆ. ಇದರಿಂದ ಆಕ್ರೋಶಿತ ಯುವತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ಆರೋಪಿ ಲಕ್ಷ್ಮಿಯನ್ನು ಬಂಧಿಸಿದ ಪೊಲೀಸರು, ಆಕೆಯೊಂದಿಗೆ ವ್ಯವಹಾರ ಕುದಿರಿಸಿದ್ದ ಪುರುಷರನ್ನು ಶೋಧಿಸಿದ್ದರು.
ಈ ವೇಳೆ ಮೂಲತಃ ಕೇರಳದ ನಿವಾಸಿಯಾಗಿದ್ದು, ಪ್ರಸಕ್ತ ಕಳೆಂಜದಲ್ಲಿರುವ ಕುರಿಯನ್ ಜೋಸೆಫ್ (56) ಮತ್ತು ಉಜಿರೆಯ ಶಿವಾಜಿ ನಗರ ನಿವಾಸಿ ಯೋಗೀಸ್ ಯಾನೆ ರಮೇಶ್ (38) ಎಂಬಿಬ್ಬರನ್ನು ವಶಕ್ಕೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಬಂಧಿತ ಲಕ್ಷ್ಮಿ ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT