ಕೋಲಾರ

ವಿಫಲ ಕೊಳವೆ ಬಾವಿ ಮುಚ್ಚಲು ಆಂದೋಲನ

ಕೋಲಾರ: ತೆರೆದ ಕೊಳವೆ ಬಾವಿಗಳಿಂದ ಆಗುತ್ತಿರುವ ಅನಾಹುತ ಅರಿತ ಗ್ರಾಮಸ್ಥರು ವಿಫಲ ಕೊಳವೆ ಬಾವಿಗಳನ್ನು ಮುಚ್ಚಲು ಆಂದೋಲನ ಕೈಗೊಂಡಿದ್ದಾರೆ.
ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಬುಧವಾರ  ಶಾಲಾ ವಿದ್ಯಾರ್ಥಿಗಳು, ಗ್ರಾಪಂ ಆಡಳಿತ ಮತ್ತು ಗ್ರಾಮಸ್ಥರು ಸಂಯುಕ್ತವಾಗಿ ಜನ ಜಾಗೃತಿ ಜಾಥಾ ನಡೆಸಿ ತೆರೆದಿದ್ದ ಖಾಸಗಿ ಮತ್ತು ಸರ್ಕಾರಿ ಕೊಳವೆ ಬಾವಿಗಳನ್ನು ಮುಚ್ಚುವ ಮೂಲಕ ಜಿಲ್ಲಾ ಆಡಳಿತ ಮತ್ತು ಜಿಪಂ ಮನವಿಗೆ ಸ್ಪಂದಿಸಿದ್ದಾರೆ.
ತೊಟ್ಲಿ ಗ್ರಾಪಂ ಕಚೇರಿ ಮುಂದೆ ಪಿಡಿಒ ಸಿ.ಎಸ್. ಶ್ರೀನಾಥ್ ಗೌಡ ಜಾಥಾಗೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು. ಗ್ರಾಮದಲ್ಲಿ ಸರ್ಕಾರಿ ಬೋರ್ವೆಲ್ಗಳನ್ನು ಮುಚ್ಚುವ ಕಾರ್ಯ ಕೊನೆ ಹಂತದಲ್ಲಿದೆ. ಗ್ರಾಪಂ ವ್ಯಾಪ್ತಿಯ 32 ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿದ್ದು, ಬಾಕಿ ಇರುವ 8 ಬೋರ್ವೆಲ್ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.    ಈ ಸಂದರ್ಭದಲ್ಲಿ ಗ್ರಾಮದ ಶಾಂತಿನಿಕೇತನ ಪ್ರೌಢಶಾಲೆ ಮುಖ್ಯೋಪಾದ್ಯಾಯ ಸಿ. ರಮೇಶ್ ಗೌಡ, ಮುಖ್ಯೋಪಾದ್ಯಾಯನಿ ರತ್ನಮ್ಮ, ಗ್ರಾಮದ ಟಿ.ವಿ. ರಮೇಶ್, ಗ್ರಾಪಂ ಕಾರ್ಯದರ್ಶಿ ನಾರಾಯಣಸ್ವಾಮಿ, ಬಿಲ್ ಕಲೆಕ್ಟರ್ ನಾರಾಯಣಪ್ಪ, ಶಿಕ್ಷಕರಾದ ಸುಗುಣ, ರಾಧಮ್ಮ, ಗಾಯತ್ರಿ, ಪದ್ಮಜ, ಕೆ. ಕೃಷ್ಣ, ಚಂದ್ರಪ್ಪ ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಲಯಾಳಂ ನಟಿ ಮೇಲೆ ಹತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಡಿಕೆಶಿ ಅವಕಾಶ ಕೇಳಿದ್ರು, ಆದ್ರೆ CM ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸ್ಫೋಟಕ ಹೇಳಿಕೆ

ಬೆಳಗಾವಿ ಅಧಿವೇಶನ 2025: ಸುವರ್ಣ ಸೌಧದಲ್ಲೂ'ನಾಟಿ ಕೋಳಿ' ಸದ್ದು, ಆರ್ ಅಶೋಕ್ ಗೆ ಸಿಎಂ ಸಿದ್ದು ಸಲಹೆ!

ಬಳಕೆಯಾಗದ ಬಾರ್‌ ಲೈಸೆನ್ಸ್ ಹರಾಜು ಕುರಿತು ಈ ವಾರ ಅಧಿಸೂಚನೆ ಸಾಧ್ಯತೆ

ಬೆಳಗಾವಿ ಅಧಿವೇಶನ: ವಿಧಾಸಭೆ ಕಲಾಪ ಆರಂಭ; ಸಾಲುಮರದ ತಿಮ್ಮಕ್ಕ ಸೇರಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ

SCROLL FOR NEXT