ಕೊಪ್ಪಳ

ಸಂಭ್ರಮದ ನಾಗರ ಪಂಚಮಿ ಆಚರಣೆ

ಯಲಬುರ್ಗಾ: ತಾಲೂಕಿನಾದ್ಯಂತ ಗುರುವಾರ ಮಹಿಳೆಯರು, ಮಕ್ಕಳು ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಹಬ್ಬ ಆಚರಿಸಿದರು.
ನಾಗರ ಪಂಚಮಿ ನಿಮಿತ್ತ ಎಳ್ಳು, ರವಾ ಉಂಡಿ ಕಟ್ಟಿ ಕಪ್ಪು ಮಣ್ಣಿನಲ್ಲಿ ಹದಿನೈದು ದಿನ ಮೊದಲೇ ಗೋದಿಯನ್ನು ಹಾಕಿ ನೆರಳಲ್ಲಿ ಮುಚ್ಚಿಟ್ಟು ಬೆಳೆಸಿದ ಗೋದಿ ಸಸಿಯನ್ನು ನಾಗಪ್ಪನಿಗೆ ಅರ್ಪಿಸಿ ಹಾಲು ಎರೆದರು. ಹೂ, ಕಾಯಿ, ಹಣ್ಣು ಹೀಗೆ ಹಲವು ಪೂಜಾ ಸಾಮಗ್ರಿಗಳೊಂದಿಗೆ ಕಲ್ಲು ನಾಗಪ್ಪ ಇರುವ ದೇವಸ್ಥಾನಗಳಿಗೆ ತೆರಳಿ ಹಾಲು ಎರೆದರು. ಹಾಲೆರೆದ ನಂತರ ಓಣಿಗಳ ಗಿಡಗಳಿಗೆ ಜೋಕಾಲಿ ಕಟ್ಟಿ ದೊಡ್ಡವರು, ಚಿಕ್ಕವರು ಎನ್ನದೆ ಆಡಿದರು. ಇದಕ್ಕೂ ಒಂದು ದಿನ ಮೊದಲೇ ನಾಗರ ಪಂಚಮಿ ಹಬ್ಬ ಪ್ರಾರಂಭವಾಗುವುದಕ್ಕಿಂತ ಐದಾರು ದಿನಗಳ ಮುಂಚಿತವಾಗಿ ರೊಟ್ಟಿ ತಯಾರಿಸಿ ಬಂಧು, ಬಳಗದವರಿಗೆ ಹಂಚಿ ರೊಟ್ಟಿ ಹಬ್ಬ ಆಚರಿಸಿದರು.
ಮಹಿಳೆಯರ ಹಬ್ಬ ಎಂದೇ ಕರೆಯಲ್ಪಡುವ ನಾಗರ ಪಂಚಮಿ ಪಟ್ಟಣದ ಸಿದ್ಧರಾಮೇಶ್ವರ ಹಿರೇಮಠ, ಬಸಲಿಂಗೇಶ್ವರ ಧರಮುರಡಿಮಠ, ದುರ್ಗಾದೇವಿ ದೇವಸ್ಥಾನ, ಅಂಚೆ ಇಲಾಖೆ ಹತ್ತಿರ, ಎನ್‌ಜಿಒ ಕ್ವಾರ್ಟರ್ಸ್ ಮತ್ತು ಪೊಲೀಸ್ ಕ್ವಾರ್ಟರ್ಸ್, ಬಸವೇಶ್ವರ ನಗರದ ದೇವಸ್ಥಾನಗಳಲ್ಲಿನ ಕಲ್ಲು ನಾಗರ ದೇವರಿಗೆ ಮತ್ತು ಹುತ್ತುಗಳಿಗೆ ಹಾಲು, ಬೆಲ್ಲದೊಂದಿಗೆ ವೈವಿಧ್ಯಮಯ ಸಿಹಿ ತಿಂಡಿಗಳನ್ನು ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Southern Zonal Council meet: ಜಲ ವಿವಾದಗಳ ಕುರಿತು ಮಾತುಕತೆಗೆ ಅಮಿತ್ ಶಾ ಕರೆಗೆ ರಾಜ್ಯಗಳ ಬೆಂಬಲ

ಹಿಸಾರ್ ಜಿಲ್ಲಾ ನ್ಯಾಯಾಲಯದ ಹೊರಗೆ ಗ್ಯಾಂಗ್‌ಸ್ಟರ್ ವಿನೋದ್ ಪನ್ನುಗೆ ಗುಂಡಿಕ್ಕಿ ಹತ್ಯೆ

ಎಲ್ಲರಿಗೂ ಕಾನೂನು ಒಂದೇ: ಅನುಮತಿ ಇಲ್ಲದೆ ತಮ್ಮ ಪೋಸ್ಟರ್‌ ಅಂಟಿಸಿದ್ದಕ್ಕೆ ಮೂರು FIR ದಾಖಲು!

'ಬಾಹುಬಲಿ'ಗೆ ಏನಾಯಿತು?: ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಆತಂಕ!

ಕೇಂದ್ರದಿಂದ ಮಹತ್ವದ ನಿರ್ಧಾರ: ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಪೀಠ ಸ್ಥಾಪನೆ