ರಾಯಚೂರು

ಆರೋಪ ಸತ್ಯಕ್ಕೆ ದೂರ: ಕಾರ್ಯಕರ್ತೆ ಪಾರ್ವತಿ

ಲಿಂಗಸ್ಗೂರು: ನಕಲಿ ಪ್ರಮಾಣ ಪತ್ರ ನೀಡಿ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿರುವುದಾಗಿ ಬೊಮ್ಮನಾಳ ತಾಂಡಾದ ಲಲಿತಾ ಚಂದಪ್ಪ ಎಂಬುವರು ನನ್ನ ಮೇಲೆ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪಾರ್ವತಿ ಮಹೇಶ ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೊಮ್ಮನಾಳ ತಾಂಡಾ ಅಂಗನವಾಡಿ ಕೇಂದ್ರಕ್ಕೆ ಹೊಸದಾಗಿ ಕಾರ್ಯಕರ್ತೆ ಹುದ್ದೆ ನೇಮಕಕ್ಕೆ ಅರ್ಜಿ ಕರೆದಿದ್ದರು. ಈ ವೇಳೆ ನಾನು ಜಾತಿ ಮತ್ತು ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದೆ. ನಾಗರಹಾಳ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಬೊಮ್ಮನಾಳ ತಾಂಡಾಕ್ಕೆ ಭೇಟಿ ನೀಡಿ ನನ್ನ ಇರುವಿಕೆ ಕುರಿತು ನನ್ನ ಮತ್ತು ನನ್ನ ಗಂಡನ ಸಮಕ್ಷಮ ವಿಚಾರಿಸಿದ್ದಾರೆ. ನಾನು ನನ್ನ ಗಂಡನ ಜೊತೆ ಹಾಜರಿದ್ದರೂ ಮುದಗಲ್ ಕಂದಾಯ ನಿರೀಕ್ಷಕರು ತಾಂಡಾದಲ್ಲಿ ವಾಸ್ತವ್ಯ ಇರುವುದಿಲ್ಲವೆಂದು ಸುಳ್ಳು ಪ್ರಕಟಣೆ ಮಾಡಿರುತ್ತಾರೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಜು.23ರಂದು ನನ್ನ ಎಲ್ಲ ದಾಖಲೆಗಳೊಂದಿಗೆ ನೇಮಕ ಅರ್ಜಿ ಸಲ್ಲಿಸಿದ್ದು, ಜು.30ರಂದು ತಮ್ಮ ಕಾರ್ಯಾಲಯದಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ಆದೇಶ ಪ್ರತಿ ಸೂಚನಾ ಫಲಕದ ಮೇಲೆ ಲಗತ್ತಿಸಲಾಗಿತ್ತು. ಆದರೆ ಲಲಿತಾ ಚಂದಪ್ಪ ಎಂಬುವರು ಸುಳ್ಳು ದಾಖಲಾತಿ ಲಗತ್ತಿಸಿ ನೇಮಕಾತಿಯಾಗಿರುವುದಾಗಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿರುತ್ತಾರೆ. ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ನಡೆಸಿದ್ದಾರೆಂದು ಮನವಿಯಲ್ಲಿ ದೂರಿದ್ದಾರೆ.
ಈ ವೇಳೆ ತಾಂಡಾದ ಕಿರಿಯಪ್ಪ ರಾಠೋಡ, ಭದ್ರಪ್ಪ ರಾಠೋಡ, ಮಹೇಶ, ಲೋಕೇಶ, ಸುರೇಶ, ಮಹಾಂತೇಶ, ಗಣೇಶ, ಪಾಂಡಪ್ಪ, ಶಂಕರ, ಚಾಂದಿಬಾಯಿ, ಭೀಮಮ್ಮ, ಗಂಗಮ್ಮ, ಸೀತಾರಾಮ್, ರವಿ ಸೇರಿದಂತೆ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT