ರಾಯಚೂರು

ವಿದ್ಯಾರ್ಥಿಗಳ ಧರಣಿ

ಲಿಂಗಸ್ಗೂರು: ಮುದೇಬಿಹಾಳ ಘಟಕದ ಸಾರಿಗೆ ಬಸ್‌ನಲ್ಲಿ ಬಸ್‌ಪಾಸ್‌ವುಳ್ಳವರಿಗೆ ಚಾಲಕ, ನಿರ್ವಾಹಕರು ಅವಕಾಶ ನೀಡದ ಕಾರಣ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿತು.
ಮುದ್ದೇಬಿಹಾಳ ಸಾರಿಗೆ ಘಟಕದ ಮುದ್ದೇಬಿಹಾಳ-ಮಂತ್ರಾಲಯ ಸಾರಿಗೆ ಬಸ್ ಲಿಂಗಸ್ಗೂರು ಮಾರ್ಗವಾಗಿ ಪ್ರತಿನಿತ್ಯ ಚಲಿಸುತ್ತದೆ. ಬುಧವಾರ ಬಸ್ ನಿಲ್ದಾಣಕ್ಕೆ ಆಗಮಿಸಿದ ವೇಳೆ ಕುಪ್ಪಿಗುಡ್ಡ, ಸರ್ಜಾಪುರ, ಪಾಮನಕೆಲ್ಲೂರು, ಕವಿತಾಳ ಸೇರಿದಂತೆ ಇತರೆ ಗ್ರಾಮಗಳ ವಿದ್ಯಾರ್ಥಿಗಳು ಲಿಂಗಸ್ಗೂರು ಪಟ್ಟಣದ ಶಾಲಾ-ಕಾಲೇಜು ಮುಗಿಸಿಕೊಂಡು ಪುನಃ ತಮ್ಮ ಗ್ರಾಮಗಳಿಗೆ ತೆರಳಲು ಬಸ್‌ನಲ್ಲಿ ಹತ್ತುತ್ತಿದ್ದಂತೆ ಚಾಲಕ, ನಿರ್ವಾಹಕರು ಬಸ್ ಪಾಸ್‌ಗೆ ಅವಕಾಶ ನೀಡುವುದಿಲ್ಲ. ಎಲ್ಲರೂ ಕೆಳಕ್ಕೆ ಇಳಿಯಿರಿ ಎಂದು ಹೇಳಿದ್ದಾರೆ.
ಇದಕ್ಕೆ ವಿದ್ಯಾರ್ಥಿಗಳು, ರಾಜ್ಯದ ವಿವಿಧ ಘಟಕಗಳ ಕೆಲ ಸಾರಿಗೆ ಬಸ್‌ಗಳು ಬಸ್‌ಪಾಸ್‌ವುಳ್ಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸಬಾರದೆಂದು ಹೊರರಾಜ್ಯದ ನಾಮಫಲಕ ಹಾಕಲಾಗುತ್ತದೆ. ಆದರೆ ಅಂತಹ ಕೆಲವು ಸಾರಿಗೆ ಬಸ್‌ಗಳು ಹೊರರಾಜ್ಯಕ್ಕೆ ತೆರಳುವುದಿಲ್ಲ. ಪ್ರತಿನಿತ್ಯ ಇಂತಹ ಬಸ್‌ಗಳಿಂದ ನಾವುಗಳು ಪರದಾಡುವಂತಾಗಿದೆ. ನಮ್ಮನ್ನು ಬಸ್‌ನಲ್ಲಿ ಕರೆದುಕೊಂಡು ಹೋಗುವವರೆಗೆ ಬಸ್ ಮುಂದೆ ಹೋಗಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ನಂತರ ಬಸ್ ನಿಲ್ದಾಣ ಸಂಚಾರಿ ನಿಯಂತ್ರಕರು ಹಾಗೂ ವಿಭಾಗೀಯ ಅಧಿಕಾರಿಗಳ ಸೂಚನೆ ಮೇರೆಗೆ ಚಾಲಕ, ನಿರ್ವಾಹಕರು ಬಸ್‌ಪಾಸ್‌ವುಳ್ಳ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT