ನವದೆಹಲಿ: ಲೋಕಸಭೆ ಚುನಾವಣಾ ರಣಕಣದಲ್ಲಿ ಬಿಜೆಪಿ ಹವಾ ಸ್ವಲ್ಪ ಜೋರಾಗಿಯೇ ಇದೆ. ಅಂತೆ ಬಿಎಸ್ಪಿ ಬೆಂಬಲಿಗನೋರ್ವ ತಪ್ಪಾಗಿ ಬಿಎಸ್ಪಿ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಕೋಪಗೊಂಡ ಬೆಂಬಲಿಗೆ ಮತ ಹಾಕಿದ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಉತ್ತರಪ್ರದೇಶದ ಬುಲಂದ್ ಶಹರ್ ಮೂಲದ ದಲಿತ ಯುವಕ ಪವನ್ ಕುಮಾರ್ ಇಲ್ಲಿನ ಶಿಕಾರ್ ಪುರ್ ಮತಗಟ್ಟೆಯಲ್ಲಿ ಬಿಎಸ್ಪಿಗೆ ಮತ ಚಲಾಯಿಸಲು ಹೋಗಿದ್ದ. ಆದರೆ ಅಲ್ಲಿ ಕಣ್ತಪ್ಪಿಪ ಬಿಜೆಪಿಗೆ ಮತ ಹಾಕಿದ್ದಾನೆ.
ತನ್ನ ತಪ್ಪಿನ ಅರಿವಾಗಿ ಮನೆಗೆ ಬಂದ ಕೂಡಲೇ ಚಾಕು ತೆಗೆದುಕೊಂಡು ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಬಳಿಕ ಬೆರಳನ್ನು ಕತ್ತರಿಸಿಕೊಂಡಿದ್ದ ವಿಡಿಯೋವನ್ನು ಪವನ್ ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಯಾಕಾಗಿ ತನ್ನ ಬೆರಳನ್ನು ಕತ್ತರಿಸಿಕೊಂಡೆ ಎಂಬುದನ್ನು ಅಲ್ಲಿಯೇ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾನೆ. ತನ್ನ ತಪ್ಪಿನ ಪ್ರಯಾಶ್ಚಿತ್ತಕ್ಕಾಗಿ ಕೈ ಬೆರಳನ್ನು ಕತ್ತರಿಸಿಕೊಂಡಿದ್ದಾಗಿ ತಿಳಿಸಿದ್ದಾನೆ.