ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ 
ದೇಶ

ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ, ಗೃಹಿಣಿಯರಿಗೆ ಮಾತ್ರ ರಾಹುಲ್ ಮೇಲೆ ಪ್ರೀತಿ: ಐಎಎನ್ಎಸ್- ಸಿವೊಟರ್ ಸಮೀಕ್ಷೆ

ವಿಶಾಲ ಭಾರತೀಯ ಸಮಾಜದಲ್ಲಿ ಮುಂದಿನ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮಾತ್ರವೇ ಮೋದಿ ಹಾಗೂ ....

ನವದೆಹಲಿ: ವಿಶಾಲ ಭಾರತೀಯ ಸಮಾಜದಲ್ಲಿ ಮುಂದಿನ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮಾತ್ರವೇ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಅಂತರ ಅತ್ಯಂತ ಕಡಿಮೆಯಾಗಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಸಿವೊಟರ್-ಐಎನ್ಎಸ್ ಪೋಲ್ ಟ್ರ್ಯಾಕರ್  ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಶೇ. 63.6 ರಷ್ಟು ನಿರುದ್ಯೋಗಿ ಯುವಕರು ನರೇಂದ್ರ ಮೋದಿಯವರು ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಬೇಕೆಂದು ಹೇಳಿದ್ದಾರೆ. ಇದೇ ವರ್ಗದ ಕೇವಲ ಶೇ. 26ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಅಭಿಪ್ರಾಯಪಟ್ಟರು.
ಗೃಹಿಣಿಯರ ವರ್ಗದಲ್ಲಿ ಶೇ. 43.3 ಮಂದಿ ಮೋದಿ ಪ್ರಧಾನಿಯಾಗಿವುದನ್ನು ನೋಡಲು ಬಯಸಿದ್ದರೆ ಶೇ. 37.2 ರಷ್ಟು ಮಂದಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಬೇಕೆಂದಿದ್ದಾರೆ. ಇತರೆ ವಿಭಾಗ, ವರ್ಗದ ಜನರಲ್ಲಿ ಹೋಲಿಸಿದರೆ ಗೃಹಿಣಿಯರ ವರ್ಗದಲ್ಲಿ ಮೋದಿಪರ ಒಲವಿರುವವರು ಅತ್ಯಂತ ವಿರಳವಾಗಿದ್ದಾರೆ.
ಸರ್ಕಾರಿ ಉದ್ಯೋಗಿಗಳು ಮೋದಿಯನ್ನು ಬಹುವಾಗಿ ಮೆಚ್ಚಿದ್ದು ಅತಿ ಹೆಚ್ಚು ಸಂಖ್ಯೆಯ ಸರ್ಕಾರಿ ಉದ್ಯೋಗಿಗಳು ಮೋದಿ ಮುಂದಿನ ಪ್ರಧಾನಿಯಾಗಬೇಕು ಎಂದಿದ್ದಾರೆ. ಶೇ.  61.1 ರಷ್ಟು ಸರ್ಕಾರಿ ನೌಕರರು ಮೋದಿಯೇ ಮುಂದಿನ ಪ್ರಧಾನಿಯಾಗಲಿ ಎಂದು ಬಯಸಿದರೆ ಕೇವಲ ಶೇ. 26ರಷ್ಟು ನೌಕರರು ಮಾತ್ರವೇ ರಾಹುಲ್ ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ಭಾವಿಸಿದ್ದಾರೆ.
ಗೃಹಿಣಿಯರ ಹೊರತಾಗಿ ಭೂಮಿರಹಿತ ಕೃಷಿ ಕಾರ್ಮಿಕರು, ಸಾಮಾನ್ಯ ಕಾರ್ಮಿಕ ವರ್ಗದಲ್ಲಿ ರಾಹುಲ್ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಆದರೆ ಇದು ಮೋದಿ ಅವರ ಪರವಾಗಿರುವವವ್ರ ಸಂಖ್ಯೆಗೆ ಸಮನಾಗುವುದಿಲ್ಲ.ಭೂರಹಿತ ಕೃಷಿ ಕಾರ್ಮಿಕ ವರ್ಗದ ಶೇ.35.4 ಮಂದಿ ರಾಹುಲ್ ಪರ ಒಲವು ತೋರಿದರೆ ಶೇ. 48.2 ಮತ್ತೆ ಮೋದಿಯನ್ನೇ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ. ಸಾಮಾನ್ಯ ಕಾರ್ಮಿಕರ ವಲಯದ ಶೇ. 35 ಮಂದಿ ರಾಹುಲ್ ಪರವಾಗಿದ್ದರೆ ಶೇ.48.9 ಮಂದಿ ಮೋದಿ ಪರವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT