ದೇಶ

ಲೋಕಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ಮೊಯ್ಲಿ, ಖರ್ಗೆಗೆ ಟಿಕೆಟ್

Raghavendra Adiga
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ  ತನ್ನ ಅಭ್ಯರ್ಥಿಗಳ ಎಂಟನೇ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಕರ್ನಾಟಕದ ಹದಿನೆಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಸಹ ಘೋಷಿಸಲಾಗಿದೆ.
ಇದು ರಾಜ್ಯದಲ್ಲಿನ ಕ್ಷೇತ್ರಗಳಿಗೆ ಕಾಂಗ್ರೆಸ್ ಪ್ರಕಟಿಸುತ್ತಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಾಗಿದೆ.
ಅದರಂತೆ ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿ, ಬೆಳಗಾವಿ - ವಿರುಪಾಕ್ಷಿ ಎಸ್. ಸಾಧುನವರ್, ಬಾಗಲಕೋಟೆ- ವೀಣಾ ಕಾಶಪ್ಪನವರ್, ಕಲಬುರ್ಗಿ (ಎಸ್ಸಿ) - ಮಲ್ಲಿಕಾರ್ಜುನ ಖರ್ಹ್ರ್. ರಾಯಚೂರು (ಎಸ್ಸಿ) - ಬಿ.ವಿ. ನಾಯಕ್, ಬೀದರ್- ಈಶ್ವರ ಖಂಡ್ರೆ, ಕೊಪ್ಪಳ- ರಾಜಶೇಖರ ಹಿಟ್ನಾಳ್, ಬಳ್ಳಾರಿ (ಎಸ್ಟಿ)- ವಿ.ಎಸ್. ಉಗ್ರಪ್ಪ, ಹಾವೇರಿ- ಡಿ.ಆರ್. ಪಾಟೀಲ್, ದಾವಣಗೆರೆ- ಶಾಮನೂರು ಶಿವಶಂಕರಪ್ಪ, ದಕ್ಷಿಣ ಕನ್ನಡ- ಮಿಥುನ್ ರೈ, ಚಿತ್ರದುರ್ಗ (ಎಸ್ಸಿ)- ಬಿ.ಎಸ್. ಚಂದ್ರಪ್ಪ, ಮೈಸೂರು-ಕೊಡಗು- ಸಿ.ಎಚ್. ವಿಜಯಶಂಕರ್, ಚಾಮರಾಜನಗರ- ಆರ್. ಧ್ರುವನಾರಾಯಣ, ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್, ಬೆಂಗಳೂರು ಕೇಂದ್ರ- ರಿಝ್ವಾನ್ ಅರ್ಷದ್, ಚಿಕ್ಕಬಳ್ಳಾಪುರ- ಎಂ. ವೀರಪ್ಪ ಮೊಯಿಲಿ, ಕೋಲಾರ (ಎಸ್ಸಿ)- ಕೆ.ಎಚ್. ಮುನಿಯಪ್ಪ ಅವರುಗಳನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.
ಕೇಂದ್ರದ ಪ್ರತಿಪಕ್ಷ ನಾಯಕ, ಮಲ್ಲಿಕಾರ್ಜುನ ಖರ್ಗೆ, ಹಾಗೂ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರಿಗೆ ಮತ್ತೆ ತಮ್ಮದೇ ಕ್ಷೇತ್ರದಲ್ಲಿ ಟಿಕೆಟ್ ದೊರಕಿದೆ.
ಇದೇ ಪಟ್ಟಿಯಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಉತ್ತರಾಖಂಡ್, ಉತ್ತರ ಪ್ರದೇಶಗಳ ಲೋಕಸಭೆ ಕ್ಷೇತ್ರಗಳಿಗೆ ಸಹ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.
ಕರ್ನಾಟಕದಲ್ಲಿ ಜೆಡಿಎಸ್ ನೊಡನೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಒಟ್ಟಾರೆ ಇಪ್ಪತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ, ಉಳಿದ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿರಲಿದ್ದಾರೆ. ಹೀಗಾಗಿ ಇದೀಗ ಹದಿನೆಂಟು ಕ್ಷೇತ್ರಗಳ ಅಭ್ಯರ್ಥಿಗಳು ಘೋಷಣೆಯಾಗಿದ್ದು ಇನ್ನು ರಾಜ್ಯದ ಎರಡು ಕ್ಷೇತ್ರಗಳಿಗೆ ಮಾತ್ರ ಕೈ ಪಕ್ಷದ ಅಭ್ಯರ್ಥಿ ಘೋಷಣೆ ಬಾಕಿ ಉಳಿದಿದೆ.
SCROLL FOR NEXT