ದೇಶ

ಭರವಸೆ ಈಡೇರಿಸದ ಬಿಜೆಪಿಗೆ ಆರ್ ಎಸ್ ಎಸ್ ಬೆಂಬಲವೂ ಇಲ್ಲ: ಪ್ರಧಾನಿ ವಿರುದ್ಧ ಮಾಯಾವತಿ ವಾಗ್ದಾಳಿ

Srinivas Rao BV
ಲಖನೌ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಎಸ್ ಪಿ ನಾಯಕಿ ಮಾಯಾವತಿ, ಚುನಾವಣಾ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಆರ್ ಎಸ್ಎಸ್ ಬಿಜೆಪಿಯನ್ನು ತೊರೆದಿದೆ ಎಂದು ಹೊಸ ಆರೋಪ ಮಾಡಿದ್ದಾರೆ. 
ಸಾರ್ವಜನಿಕರಿಂದ ಟೀಕೆಗೊಳಗಾಗುವ ಭಯದಿಂದ ಆರ್ ಎಸ್ಎಸ್, ಭರವಸೆಯನ್ನು ಈಡೇರಿಸದ ಬಿಜೆಪಿಯನ್ನು ಬೆಂಬಲಿಸುವುದನ್ನು ಬಿಟ್ಟಿದೆ ಎಂದು ಮಾಯಾವತಿ ಎಎನ್ಐ ಗೆ ನೀಡಿರುವ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೋಲುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಯನ್ನು ಆರ್ ಎಸ್ಎಸ್ ಬೆಂಬಲಿಸುತ್ತಿಲ್ಲಾ ಎಂಬುದೂ ಸ್ಪಷ್ಟ, ಏಕೆಂದರೆ ಬಿಜೆಪಿ ಈ ಹಿಂದಿನ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಈ ರೀತಿಯಿದ್ದಾಗ ಬಿಜೆಪಿಯನ್ನು ಬೆಂಬಲಿಸಿದರೆ ಸಾರ್ವಜನಿಕರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಆರ್ ಎಸ್ಎಸ್ ಅರಿತಿದೆ ಎಂದು ಮಾಯಾವತಿ ಹೇಳಿದ್ದಾರೆ. 
ಬಿಜೆಪಿ ಪರವಾಗಿ ಯಾವುದೇ ಆರ್ ಎಸ್ಎಸ್ ನ ಕಾರ್ಯಕರ್ತನೂ ಪ್ರಚಾರ ಮಾಡುತ್ತಿಲ್ಲ. ಪ್ರಧಾನಿಗೆ ಇದು ಸಂಕಷ್ಟದ ಸಮಯ ಎಂದೂ ಮಾಯಾವತಿ ಟೀಕೆ ಮಾಡಿದ್ದಾರೆ. 
SCROLL FOR NEXT