ದೇಶ

ಚುನಾವಣೆ ಮುಕ್ತಾಯದ ಹಂತದಲ್ಲಿ ಮೋದಿ ಪತ್ರಿಕಾಗೋಷ್ಠಿ : ರಾಹುಲ್ ಗಾಂಧಿ ಟೀಕೆ

Srinivas Rao BV
ನವದೆಹಲಿ: ಕಳೆದ 5 ವರ್ಷಗಳಲ್ಲಿ ಮೋದಿ ಎಂಬ ಕಲ್ಪನೆ ನೆಲ ಕಚ್ಚಲು ಕಾಂಗ್ರೆಸ್ ಸಮರ್ಥವಾಗಿ ಕಾರ್ಯನಿರ್ವಹಿಸಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 
ಚುನಾವಣೆ ಮುಕ್ತಾಯದ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದನ್ನು ಮೂದಲಿಸಿರುವ ರಾಹುಲ್ ಗಾಂಧಿ, ರಾಫೆಲ್ ವಿಷಯವಾಗಿ ಚರ್ಚೆ ನಡೆಸುವ ನನ್ನ ಸವಾಲನ್ನು ಪ್ರಧಾನಿ ಏಕೆ ಸ್ವೀಕರಿಸಲಿಲ್ಲ ಎಂದು ಕೇಳಿದ್ದಾರೆ. 
ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದಂತೆಯೇ ಅಮಿತ್ ಶಾ- ನರೇಂದ್ರ ಮೋದಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಪತ್ರಿಕಾಗೋಷ್ಠಿ ನಡೆಸಿದ್ದರು. 
ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ರಾಹುಲ್ ಗಾಂಧಿ, ಮೋದಿ-ಶಾ ಅವರ ತತ್ವ ಮಹಾತ್ಮಾ ಗಾಂಧಿ ಅವರ  ತತ್ವವಾಗಿರುವುದಕ್ಕೆ ಸಾಧ್ಯವಿಲ್ಲ ಹೇಳಿದ್ದಾರೆ. 
SCROLL FOR NEXT