ದೇಶ

ಚುನಾವಣೋತ್ತರ ಸಮೀಕ್ಷೆ ನಂತರ ರಾಜಕೀಯವಾಗಿ ಐಸಿಯು ಸೇರಿದ ಪ್ರತಿಪಕ್ಷಗಳು: ಗಿರಿರಾಜ್ ಸಿಂಗ್

Nagaraja AB

ನವದೆಹಲಿ:  ಚುನಾವಣೋತ್ತರ ಸಮೀಕ್ಷೆ ಹೊರಬಂದ ನಂತರ ಎಲ್ಲಾ ಪ್ರತಿಪಕ್ಷಗಳು ಪ್ರಜ್ಞೆ ಕಳೆದುಕೊಂಡಂತಾಗಿವೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಬಹುತೇಕ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಿದ್ದು, ಪ್ರತಿಪಕ್ಷಗಳ ಕನಸು ನನಸಾಗುವುದಿಲ್ಲ ಎಂದಿದ್ದಾರೆ.

ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಸೇರಿದಂತೆ ಎಲ್ಲಾ ಪ್ರತಿಪಕ್ಷಗಳ ಮುಖಂಡರು ರಾಜಕೀಯವಾಗಿ ಐಸಿಯು ಸೇರಿದ್ದು, 23 ನಂತರ ಈ ಎಲ್ಲಾ ನಾಯಕರು  ಉತ್ತಮ ಭವಿಷ್ಯಕ್ಕಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ಚುನಾವಣೋತ್ತರ ಸಮೀಕ್ಷೆಗಳು ಸರಿಯಾಗಿಲ್ಲ ಎಂದು ಪ್ರತಿಪಕ್ಷಗಳು ಹೇಳುತ್ತಿವೆ
SCROLL FOR NEXT